Skip to main content

ರಾಮಾಯಣ ಭಾಗ 2

    

11 ರಾಮನ ವನವಾಸ   ರಾಮಾಯಣ ಬಾಗ 2 

ಪರಿವರ್ಧಿನಿ ಷಟ್ಪದಿ

ಪಂಕಜಾ.ಕೆ. ರಾಮಭಟ್


ಮಡದಿಯ ಮಾತನು ಕೇಳಿದ ದಶರಥ

ಬುಡವನು ಕಡಿದಿಹ ಬಾಳೆಯ ತೆರದೊಳ-

-ಗೊಡನೆಯೆ ಬಿದ್ದನು ಮತಿಯನು ಕಳೆಯುತ ಮನದಲಿ ನೋಯುತಲಿ

ಬಿಡದಿಯಲೆಲ್ಲೆಡೆ ಹರಡಿದ ಸುದ್ದಿಯು

ಬಿಡದೆಯೆ ತಲುಪಿತು  ರಾಮನ ಕಿವಿಯನು

ಗಡಿಬಿಡಿಯಿಂದಲಿ ತಂದೆಯ ಕಾಣಲು ಬಂದನು ತ್ವರಿತದಲಿ

 

ತಂದೆಯ ನೋವಿನ ಕಾರಣ ಕೇಳಲು

ಮುಂದೆಯೆ ನಿಲ್ಲುತ ತಿಳಿಸಿದನವನಲಿ

ಕುಂದಿದ ಮೊಗದಲಿ ಬೇಸರ ತೋರುತ  ತನ್ನಯ ವರಗಳನು

ಬಂದಿಹ ಕಷ್ಟಗಳರಿಯಲು ರಾಮನು 

ತಂದೆಯ ಮಾತನು ಪಾಲಿಪೆನೆನ್ನುತ

ಮಂದಿಯರೆಲ್ಲರ   ಹಿಂದೆಯೆ ಬಿಡುತಲಿ ನಡೆದನು ಕಾಡಿನೆಡೆ


ಸೀತೆಯು  ಪತಿಯನ್ನನುಸರಿಸುತ್ತಲಿ

ಮಾತೆಯ ಚರಣಕ್ಕೆರಗುತ ಬೇಡಲು

ಭೀತಿಯ ತೋರುತ ಹರಸಿದಲೊಲವಲಿ ಜಾನಕಿ ದೇವಿಯನು

ಜಾತಕ ಪಕ್ಷಿಯ ತೆರದಲಿ ಲಕ್ಷ್ಮಣ 

ಪಾತಕಿ ಕೈಕೆಯ ನಿಂದಿಸುತಿರುತಲಿ  

ಕಾತುರದಿಂದಲಿ ರಾಮನ ಜತೆಯಲಿ  ನಡೆದನು ತವಕದಲಿ


ವನವಾಸಕೆ ಹೊರಟಿಹ ರಾಮನ ಜತೆ

ಜನಕನ ಕುವರಿಯು ಹೊರಟಳು ನಗುತಲಿ

ಮನದಲಿ ತುಂಬಿದ ದುಗುಡವ ಸರಿಸುತ ನಾರಿನ ಮಡಿಯುಟ್ಟು

ಬನದಲಿ ನಡೆಯುತ ಬಳಲಿದ ಮೂವರು

ತಿನುತಲಿ ಕಾಡಲಿ ಬೆಳೆದಿಹ ಫಲಗಳ

ಮನಸಿನ ಚಿಂತೆಯು ಕಳೆಯಲು ಬೇಗನೆ ಕಣ್ಣನು ಮುಚ್ಚಿದರು


ದಶರಥ ರಾಜನು ದುಃಖದಿ ನರಳುತ

ವಶವನು ಕಳೆದನು ತನುಮನವೆಲ್ಲವ

ನಶೆಯಲಿ ಬೀಳುತ  ಬಿಟ್ಟನು ತನ್ನಯ ಪ್ರಾಣವ ಕ್ಷಣದಲ್ಲೇ

ಕಸಿವಿಸಿಗೊಂಡಿಹ ಮನದಲಿ ಮಂತ್ರಿಯು

ಕುಸಿಯುವ ಜೀವವ ಕರದಲಿ ಹಿಡಿಯುತ

ತುಸುವೇ ಸಮಯದಿ ಕರೆಸಿದ ಭರತನ ವಿಷಯವನರುಹುತಲಿ


 ನಡೆದಿಹ ಘಟನೆಯ ಕೇಳಿದ ಭರತನು

ಗಡಿಬಿಡಿಯಿಂದಲಿ ಸರಸರ ಸರಿಯುತ

ಲೊಡನೆಯೆ ಬಂದನು ವೇಗದಿ ಪುರದೆಡೆ  ರಾಮನ  ಧೇನಿಸುತ

ತೊಡೆಯುತ ಕಣ್ಣಿನ ನೀರನು ಕರದಲಿ

ಬಿಡದಿಯಲಿಳಿಯದೆ ಕರೆದನು ಸಕಲರ 

ತಡವನು ಮಾಡದೆ ನಡೆದನು  ತಾಯಿಯನರಸುತ   ಬಿಡದಿಯೆಡೆ


ಮರಳಿದ ಭರತನು  ವಿಷಯವ ತಿಳಿಯಲು

ಕೆರಳಿದ ತಕ್ಷಣ  ಮಾತೆಯ ಮೇಲೆಯೆ

ಹರಿಸಿದ ಮಾತಿನ  ಬಾಣವನವಳೆಡೆ ದುಃಖದಿ ಕುಸಿಯುತಲಿ

ಸರಸರ ಸರಿಯುತ ಮಂತ್ರಿಯ ಜತೆಯಲಿ

ಭರದಲಿ ಹೊರಟನು ರಾಮನನರಸುತ

ಕರೆತರುವೆನವನನೆನುತಲಿ ನಡೆದನು ಕಾಡಿನ ದಾರಿಯಲಿ


ಪಂಕಜಾ.ಕೆ. ರಾಮಭಟ್





 

Comments

Popular posts from this blog

ಚಂದಿರ ಕವನ

ಚಂದಿರ ಕಾರಿರುಳ  ರಾತ್ರಿಯಲಿ ಮೋಡದ ಮರೆಯಿಂದ ಇಣುಕುತ ಬರುತಿಹನು ಬೆಳ್ಳಿಯತಟ್ಟೆಯ ತರದಲಿ ತೇಲುತ ತಾರೆಗಳನೊಡನಾಡುತ ಬರುತಿಹನು ರಸಿಕರ ಎದೆಯಲಿ ಕನಸನು ತುಂಬುತ ಮೈಮನಕೆಲ್ಲಾ ತಂಪನು ತರುತಿಹನು ಒಲವರಸವನು ಹರಿಸುತ ಮನದಲಿ ಸಂತಸ ಸಂಭ್ರಮ ತುಂಬುವನು ಬಾನಲಿಇಣುಕುವ ಚಂದ್ರನ ಕಂಡು ತನ್ನೊಡನಾಡಲು ಬರುವನು ಎಂದು ನೈದಿಲೆ ಮೊಗವನು ಅರಳಿಸಿತು ಮುಗ್ದ ಮಗುವಿನ ತೆರದಲಿ ನಗುತ ಜೀವಕೆ ಉಲ್ಲಾಸವ ತುಂಬುವನು ಮೋಡದ ಮರೆಯಲಿ ಇಣುಕುವ ಚಂದ್ರನ ಕಾಣುತ ನನ್ನನು ನಾನೇ ಮರೆಯುವೆನು ಪಂಕಜಾ.ಕೆ

ರಕ್ತದಾನ ಕವನ ಮತ್ತು ವಿಮರ್ಶೆ

[04/07, 8:09 PM] pankajarambhat: ರಕ್ತದಾನ ಅವಸರದ ಕ್ಷಣಗಳಲಿ ಅಪಘಾತಗಳ ಸುಳಿಯಲಿ ಕಳೆದು ಕೊಂಡಿಹ ರಕ್ತ ತುಂಬಿಸಲು ಬಲು ಕಷ್ಟ ಮಾನವ ಜೀವನ ಅನಿತ್ಯ ರಕ್ತದಾನವೊಂದೇ ಸತ್ಯ ಉಸಿರು ಉಳಿಸುವ ಶಕ್ತಿ ರಕ್ತದಾನಿಯ ಬುತ್ತಿ ಮಾನವತೆಯ ಬಂಧ ರಕ್ತದಾನ ದ ಅನುಬಂಧ ರಕ್ತದಾನ ಒಂದು ಮಹಾದಾನ ಆರೋಗ್ಯ ಭಾಗ್ಯದ ಪಾನ ಬಡವ ಬಲ್ಲಿದ ಭೇಧವಿಲ್ಲ ಜಾತಿ ವಿಜಾತಿಗಳ ಲೆಕ್ಕವಿಲ್ಲ ಹರಿವುದೊಂದೇ ರಕ್ತ ಮನುಜ ಇದರಿಂದ ಶಕ್ತ ರಕ್ತವೆನ್ನುವ ಅಮೃತ ಅದಿಲ್ಲದಿರೆ ಮನುಜ ಮೃತ ರಕ್ತದಾನವ ಮಾಡಬೇಕು ಇನ್ನೊಬ್ಬರ ಪ್ರಾಣ ಉಳಿಸಬೇಕು  ದಾನ ಮಾಡಿದ ರಕ್ತ ತುಂಬುವುದು ನಿತ್ಯ ಬೇಕಿಲ್ಲ ಇದರಲ್ಲಿಭಯ ಉಳಿಸಬೇಕು ನೊಂದಜೀವ ಮಾಡಿ ಬಿಡು ರಕ್ತದಾನ ಕೊಟ್ಟುಬಿಡು ಜೀವದಾನ ಬೇರಿಲ್ಲಇದಕೆ ಸಾಟಿಯದ ದಾನ ರಕ್ತದಾನವೊಂದು ಮಹಾದಾನ ಉಸಿರು ಹೋಗುವ ಮುನ್ನ ಮಾಡಿಬಿಡು ರಕ್ತದಾನ ಸ್ವ ಇಚ್ಛೆಯಿಂದ ಕೊಟ್ಟ ದಾನ  ಕೊಟ್ಟೀತು ಮನಕೆ  ಸಮಾಧಾನ ಪಂಕಜಾ.ಕೆ. ಮುಡಿಪು [04/07, 8:28 PM] +91 94493 26765: ರಕ್ತ ದಾನ ಜೀವವನ್ನೆ ಉಳಿಸುತ್ತೆ ಇದಕ್ಕಿಂದ ಬೇರೆ ದಾನ ಬೇಕೆ. ಸುಂದರ ಕವನ 💐🙏🏻 [04/07, 8:47 PM] +91 96638 12303: ರಕ್ತದಾನದ ಮೇಲೆ ಬರೆದ ಕವನ ಅರ್ಥವತ್ತಾಗಿ,  ಸಂದೇಶಭರಿತವಾಗಿದೆ. ಅಭಿನಂದನೆಗಳು ಮೇಡಂ [04/07, 9:20 PM] +91 72595 69643: ರಕ್ತದಾನ ಜೀವದಾನ. ನೀವು ಬರೆದ ಸಾಲುಗಳು ಅದೆಷ್ಟು ಜೀವಿಗಳನ್ನು ಕಾಪಾಡುವ ಮಾನವೀಯತೆ, ಸೌಜನ್ಯತೆ ಮತ್ತು ಸಹಾಯ ಗುಣಗಳು ಎದ್ದು ಕಾಣುತ್

ಮಗು..ನಗು

ಮಗು...ನಗು ಅರಳಿದೆ ತನುವು ನಿನ್ನೊಲವ ಸವಿದು ಸಂತಸದ ಹೊನಲು ಹರಿಯುತ್ತಿದೆಇಂದು ಒಲವಿನಾ ಬಳ್ಳಿಯು ಚಿಗುರುತಿದೆ ನಮ್ಮೊಲವಿಗೆ ಸಾಕ್ಷಿಯಾಗಿ ನಗುತಿದೆ ಮನದಲಿ  ಮುದ ತುಂಬಿದೆ ಇನಿಯ ಒಡಲೆಲ್ಲಾಹರಿದಾಡಿನೀಡುವನು  ಕಚಗುಳಿಯ ಕಂದಮ್ಮ ಮನೆ ತುಂಬಾ ನಲಿದಾಡಿ ಕೊಡುವನು ಸಂತಸವ ಬಾಳೆಲ್ಲ ಹರಿದಾಡಿ ಮುದ್ದು ಮಗುವಿನ ಆಟ ಪಾಠ ತುಂಬಿದೆ ಮನೆಯಲಿ ಸಂತಸದ ಕೂಟ ಆತನ ಬಾಲ ಲೀಲೆಗಳೇನು ಚೆನ್ನ ನಂದಗೋಕುಲ ಮಗುವಿರುವ ಮನೆ ಚಿನ್ನ ಬಂಜೆಯೆಂಬ ಸೊಲ್ಲಡಗಿ ಸಂತಸವ ತಂದೆ ನಮ್ಮ ಬಾಳಿಗೆ ತುಂಬಿದ ಹರುಷವನಿಂದೆ ಸಾರ್ಥಕವಾಯಿತು ನನ್ನೀ ಬಾಳು ಇನ್ನಿಲ್ಲ ಮನದಲ್ಲಿ  ಎಂದು ಗೋಳು ಮನೆತುಂಬ ತುಂಬಿದೆ  ಅಳು ನಗು ಮನೆ ಒಳ ಹೊರಗೆಲ್ಲಾ ನಿನ್ನದೇ ಮಗು ನಗುತಿರು ಎಂದೆಂದೂ. ನನ್ನ  ಕಂದ ಬಾಳಲ್ಲಿ ತುಂಬಿರಲಿ ನಿತ್ಯ ಆನಂದ ಪಂಕಜಾ ಕೆ.