24 ಭರತನ ಆಗಮನ ಚಿಲಿಪಿಲಿ
ರಾಮಾಯಣ ಭಾಗ 3 ಮನೋಲ್ಲಾಸ
(ಪರಿವರ್ಧಿನಿ ಷಟ್ಪದಿ)
ಪಂಕಜಾ.ಕೆ. ರಾಮಭಟ್
ಬರುತಿಹ ಭರತನ ಕಾಣಲು ಲಕ್ಷ್ಮಣ
ಸರಸರನೇರಿದ ಮರವನು ಬೇಗನೆ
ಭರದಲ್ಲರುಹಿದ ಕಂಡಿಹ ವಾರ್ತೆಯನನುಜಾ ರಾಮನಲಿ
ಪುರಜನರೆಲ್ಲರು ಬರುತಿಹ ವಿಷಯವ
ನರಹರಿ ರೂಪದ ರಾಮನು ಕೇಳಲು
ಕರವನು ಚಾಚುತ ನಿಂತನು ನೋಡುತ ಭರತನ ದಾರಿಯನು
ಬಂದಿಹ ತಮ್ಮನ ತೆಕ್ಕೆಗೆ ಸೆಳೆಯುತ
ಮಂದಿಯರೆಲ್ಲರ ಕೂಡಿಸಿ ನುಡಿದನು
ಬಂದಿಹ ಕಷ್ಟವು ಕಳೆವುದು ಬೇಗನೆ ಚಿಂತೆಯ ಮಾಡದಿರಿ
ಮುಂದಿನ ದಿನದಲಿ ಭರತನೆ ರಾಜನು
ವಂದಿಸಿ ನಡೆಯಿರಿ ಭಕ್ತಿಯ ತೋರುತ
ಕುಂದನು ತೋರದತೆರದಲ್ಲವನೂ ರಾಜ್ಯವನಾಳುವನು
ಎಂದಿಹ ರಾಮನ ಮಾತನು ಕೇಳುತ
ಬಂದಿಹ ಮಂದಿಯು ವಂದಿಸಿ ನಡೆಯಲು
ನೊಂದಿಹ ಭರತನು ಪಾದುಕೆ ತಲೆಯಲಿ ಹೊರುತಲಿ ನಡೆದಿಹನು
ಕಂದನ ತೆರದಲಿ ಮನವನು ಹೊಂದಿದ
ನಂದನ ದಶರಥ ಪುತ್ರನು ಬೇಗನೆ
ನೊಂದಿಹ ಜನರೆಡೆ ತನ್ನಯ ಕರುಣೆಯ ನೋಟವ ಹರಿಸಿದನು
ಪಂಕಜಾ. ಕೆ. ರಾಮಭಟ್
Comments
Post a Comment