Skip to main content

ರಾಮಾಯಣ ಭಾಗ3

 24  ಭರತನ ಆಗಮನ  ಚಿಲಿಪಿಲಿ

ರಾಮಾಯಣ ಭಾಗ 3 ಮನೋಲ್ಲಾಸ

(ಪರಿವರ್ಧಿನಿ ಷಟ್ಪದಿ)

ಪಂಕಜಾ.ಕೆ. ರಾಮಭಟ್ 


ಬರುತಿಹ ಭರತನ ಕಾಣಲು ಲಕ್ಷ್ಮಣ

ಸರಸರನೇರಿದ  ಮರವನು   ಬೇಗನೆ

ಭರದಲ್ಲರುಹಿದ  ಕಂಡಿಹ ವಾರ್ತೆಯನನುಜಾ ರಾಮನಲಿ

ಪುರಜನರೆಲ್ಲರು ಬರುತಿಹ  ವಿಷಯವ

ನರಹರಿ ರೂಪದ ರಾಮನು ಕೇಳಲು

ಕರವನು ಚಾಚುತ  ನಿಂತನು   ನೋಡುತ ಭರತನ   ದಾರಿಯನು


ಬಂದಿಹ ತಮ್ಮನ  ತೆಕ್ಕೆಗೆ ಸೆಳೆಯುತ

ಮಂದಿಯರೆಲ್ಲರ ಕೂಡಿಸಿ ನುಡಿದನು

ಬಂದಿಹ ಕಷ್ಟವು ಕಳೆವುದು  ಬೇಗನೆ ಚಿಂತೆಯ ಮಾಡದಿರಿ

ಮುಂದಿನ  ದಿನದಲಿ ಭರತನೆ ರಾಜನು

ವಂದಿಸಿ ನಡೆಯಿರಿ  ಭಕ್ತಿಯ ತೋರುತ

ಕುಂದನು ತೋರದತೆರದಲ್ಲವನೂ ರಾಜ್ಯವನಾಳುವನು


ಎಂದಿಹ ರಾಮನ ಮಾತನು ಕೇಳುತ

ಬಂದಿಹ  ಮಂದಿಯು ವಂದಿಸಿ ನಡೆಯಲು

ನೊಂದಿಹ ಭರತನು ಪಾದುಕೆ ತಲೆಯಲಿ ಹೊರುತಲಿ ನಡೆದಿಹನು

ಕಂದನ ತೆರದಲಿ ಮನವನು ಹೊಂದಿದ

ನಂದನ ದಶರಥ ಪುತ್ರನು ಬೇಗನೆ

ನೊಂದಿಹ ಜನರೆಡೆ ತನ್ನಯ  ಕರುಣೆಯ ನೋಟವ ಹರಿಸಿದನು


ಪಂಕಜಾ. ಕೆ. ರಾಮಭಟ್







Comments

Popular posts from this blog

ಚಂದಿರ ಕವನ

ಚಂದಿರ ಕಾರಿರುಳ  ರಾತ್ರಿಯಲಿ ಮೋಡದ ಮರೆಯಿಂದ ಇಣುಕುತ ಬರುತಿಹನು ಬೆಳ್ಳಿಯತಟ್ಟೆಯ ತರದಲಿ ತೇಲುತ ತಾರೆಗಳನೊಡನಾಡುತ ಬರುತಿಹನು ರಸಿಕರ ಎದೆಯಲಿ ಕನಸನು ತುಂಬುತ ಮೈಮನಕೆಲ್ಲಾ ತಂಪನು ತರುತಿಹನು ಒಲ...

ರಕ್ತದಾನ ಕವನ ಮತ್ತು ವಿಮರ್ಶೆ

[04/07, 8:09 PM] pankajarambhat: ರಕ್ತದಾನ ಅವಸರದ ಕ್ಷಣಗಳಲಿ ಅಪಘಾತಗಳ ಸುಳಿಯಲಿ ಕಳೆದು ಕೊಂಡಿಹ ರಕ್ತ ತುಂಬಿಸಲು ಬಲು ಕಷ್ಟ ಮಾನವ ಜೀವನ ಅನಿತ್ಯ ರಕ್ತದಾನವೊಂದೇ ಸತ್ಯ ಉಸಿರು ಉಳಿಸುವ ಶಕ್ತಿ ರಕ್ತದಾನಿಯ ಬುತ್ತಿ ಮಾನವತೆಯ ಬಂಧ ರಕ್ತದಾನ ದ ಅನುಬಂಧ ರಕ್ತದಾನ ಒಂದು ಮಹಾದಾನ ಆರೋಗ್ಯ ಭಾಗ್ಯದ ಪಾನ ಬಡವ ಬಲ್ಲಿದ ಭೇಧವಿಲ್ಲ ಜಾತಿ ವಿಜಾತಿಗಳ ಲೆಕ್ಕವಿಲ್ಲ ಹರಿವುದೊಂದೇ ರಕ್ತ ಮನುಜ ಇದರಿಂದ ಶಕ್ತ ರಕ್ತವೆನ್ನುವ ಅಮೃತ ಅದಿಲ್ಲದಿರೆ ಮನುಜ ಮೃತ ರಕ್ತದಾನವ ಮಾಡಬೇಕು ಇನ್ನೊಬ್ಬರ ಪ್ರಾಣ ಉಳಿಸಬೇಕು  ದಾನ ಮಾಡಿದ ರಕ್ತ ತುಂಬುವುದು ನಿತ್ಯ ಬೇಕಿಲ್ಲ ಇದರಲ್ಲಿಭಯ ಉಳಿಸಬೇಕು ನೊಂದಜೀವ ಮಾಡಿ ಬಿಡು ರಕ್ತದಾನ ಕೊಟ್ಟುಬಿಡು ಜೀವದಾನ ಬೇರಿಲ್ಲಇದಕೆ ಸಾಟಿಯದ ದಾನ ರಕ್ತದಾನವೊಂದು ಮಹಾದಾನ ಉಸಿರು ಹೋಗುವ ಮುನ್ನ ಮಾಡಿಬಿಡು ರಕ್ತದಾನ ಸ್ವ ಇಚ್ಛೆಯಿಂದ ಕೊಟ್ಟ ದಾನ  ಕೊಟ್ಟೀತು ಮನಕೆ  ಸಮಾಧಾನ ಪಂಕಜಾ.ಕೆ. ಮುಡಿಪು [04/07, 8:28 PM] +91 94493 26765: ರಕ್ತ ದಾನ ಜೀವವನ್ನೆ ಉಳಿಸುತ್ತೆ ಇದಕ್ಕಿಂದ ಬೇರೆ ದಾನ ಬೇಕೆ. ಸುಂದರ ಕವನ 💐🙏🏻 [04/07, 8:47 PM] +91 96638 12303: ರಕ್ತದಾನದ ಮೇಲೆ ಬರೆದ ಕವನ ಅರ್ಥವತ್ತಾಗಿ,  ಸಂದೇಶಭರಿತವಾಗಿದೆ. ಅಭಿನಂದನೆಗಳು ಮೇಡಂ [04/07, 9:20 PM] +91 72595 69643: ರಕ್ತದಾನ ಜೀವದಾನ. ನೀವು ಬರೆದ ಸಾಲುಗಳು ಅದೆಷ್ಟು ಜೀವಿಗಳನ್ನು ಕಾಪಾಡುವ ಮಾನವೀಯತೆ, ಸೌಜನ್ಯತೆ ಮತ್ತು ಸಹಾಯ ...

ಶಿಶು ಪ್ರಾಸ ಗೀತೆ

ಶಿಶು ಪ್ರಾಸ ಗೀತೆ  ಕಾವ್ಯಕೂಟ ಸ್ಪರ್ಧೆಗಾಗಿ   1  ಚುಕು ಚುಕು ಎನ್ನುವ ರೈಲು ಪುಟ್ಟನ ಕೈಯಲಿ ಕೋಲು ತಂಗಿಯೂ ಬಂದಳು ಜತೆಗೆ ಆಟವ ಆಡಲು ಹೊರಗೆ   2..ತುಂಟನು ನಮ್ಮ ಪುಟ್ಟ ತಂಟೆಯ ಮಾಡುತ ಬಿದ್ದ ಅಮ್ಮನು ಕೊಟ್ಟಳು ಪೆಟ್ಟು ಕೂಗುತ ಓಡಿದ  ಎದ್ದು ಬಿದ್ದು ಪಂಕಜಾ.ಕೆ.ಮುಡಿಪು 18.6 2020