ರಾಮಾಯಣ ಭಾಗ 5
ರಾವಣನ ಸಂಹಾರ
ಪಂಕಜಾ. ಕೆ. ರಾಮಭಟ್
ಹುಡುಕುತ ಬಳಲಿದ ರಾಮನು ಸೀತೆಯ
ಗಡಿಬಿಡಿಯಿಂದಲಿ ವನದೆಲ್ಲೆಡೆಯಲಿ
ಮಡದಿಯ ಸುಳಿವನು ಕಾಣದೆ ಮನದಲಿ ಬೇಸರ ಪಟ್ಟಿಹನು
ತಡೆಯನ್ನೊಡ್ಡಿದ ಪಕ್ಷಿಯು ನರಳುತ
ತಡೆಯುತ ತನ್ನಯ ನೋವನು ಗಣಿಸದೆ
ಲೊಡನಯೆ ಹೇಳಿದ ರಾವಣ ಸೀತೆಯ ಕದ್ದಿಹ ವಾರ್ತೆಯನು
ವಾನರ ವೀರರ ಜತೆಯಲಿ ರಾಮನು
ಸೇನೆಯ ಕೂಡಿಸಿ ಸೇತುವೆ ಕಟ್ಟಿದ
ಮೇನೆಯುಯಿಲ್ಲದೆ ನಡೆಯುತ ಲಂಕೆಯ ಬೇಗನೆ ಮುಟ್ಟಿದರು
ಕಾನನದೆಡೆಯಲಿ ಸರಸರ ಸರಿಯುತ
ದಾನವರೆಲ್ಲರ ತಲೆಯನು ತರಿಯುತ
ಮಾನವ ರೂಪದ ರಾಮನು ಕೊಂದನು ಬೇಗನೆ ರಾವಣನ
ವರುಷವು ಕಳೆಯಲು ರಾಮನು ಹೊರಟನು
ಭರತನ ಕಾಣಲಯೋದ್ಯೆಯೆಡೆಗೆಯೇ
ಮರೆಯದೆ ವಾನರ ವೀರರ ಕರೆಯುತ ನಡೆದನು ವೇಗದಲಿ
ಬರುತಿಹ ರಾಮನ ಚರಣಕ್ಕೆರಗುತ
ನರಹರಿಯೊಪ್ಪಿಸು ರಾಜ್ಯವನೆನುತಲಿ
ಭರತನುಯಿಟ್ಟನು ಪಾದುಕೆಯೆಲ್ಲವ ರಾಮನ ಪದತಲದಿ
ಜೈ ಶ್ರೀ ರಾಮ್
ಪಂಕಜಾ ಕೆ ರಾಮಭಟ್
ಜಿ
Comments
Post a Comment