[4/9/2022, 7:50 pm] Pankaja K: ಗುರುಕುಲಾ ಕೊಡಗು ಘಟಕ
ಚಿತ್ರಕ್ಕೊಂದು ಕವನ
*ವರುಣಾಘಾತ*
ಕೊಳೆಯನು ತೊಳೆಯುತ ಭರದಲಿ ಬರುತಲಿ
ಮಳೆಯದು ಸುರಿಯಿತು ಬಿರುಸಿನಲಿ
ಹೊಳೆಯಂತಾಯಿತು ರಸ್ತೆಗಳೆಲ್ಲವು
ಕಾಂಕ್ರೀಟ್ ಕಾಡಿನ ಮಧ್ಯದಲಿ
ರಸ್ತೆಗಳೆಲ್ಲವೂ ನೀರಲಿ ಮುಳುಗಲು
ದಾರಿಯು ಕಾಣದೆ ಬಳಲಿದರು
ನೀರಿನ ಮೇಲೆಯೇ ವಾಹನ ಓಡಿಸಲು
ಸರ್ಕಸ್ ಮಾಡುತ ದಣಿಯುವರು
ಹಸಿರಿನ ಗುಡ್ಡ ಕಾಡನು ಕಡಿಯುತ
ಕಟ್ಟಿದ ಕಾಂಕ್ರಿಟ್ ಕಾಡುಗಳನು
ಸುರಿಯುವ ನೀರಿಗೆ ಹರಿಯಲು ಆಗದೆ
ಕೊಚ್ಚಿತು ಮನೆ ಮಠಗಳನು
ಮನುಜನೆ ತಿಳಿ ನೀ ಕಾಡುಗಳಿದ್ದರೆ
ನಮ್ಮಯ ಜೀವನ ಸುಸೂತ್ರವು
ಪ್ರಕೃತಿಯ ಸಿರಿಯನು ಹಾಳುಗೆಡವದೆ
ಉಳಿಸುತಲಿರೆ ಜೀವನ ಪಾವನವು
*ಪಂಕಜಾ.ಕೆ ಮುಡಿಪು*
[11/9/2022, 2:13 pm] Pankaja K: *ಗುರುಕುಲಾ ಕೊಡಗು ಘಟಕ*
*ಸ್ಪರ್ಧೆಗಾಗಿ* **ರುಬಾಯಿ*
*ದತ್ತಪದ ನಗು*
ನಗು ತುಂಬಿರುವ ಮುಖದ ಕಳೆ
ಹುಲುಸಾಗಿ ಬೆಳೆದಿರುವ ಬೆಳೆ
ಮನದ ನೋವು ಮರೆವ ಔಷಧಿ
ಮನೆ ಮನಕೆ ಸಂತಸದ ಹೊಳೆ
*ಪ್ರತಿ ಸಾಲಿನಲ್ಲೂ 11 ಅಕ್ಷರವಿದೆ*
*ಪಂಕಜಾ.ಕೆ ಮುಡಿಪು*
[11/9/2022, 2:54 pm] Pankaja K: ಗುರುಕುಲಾ ಚಿಕ್ಕಮಗಳೂರು
ಚುಟುಕು ಸ್ಪರ್ಧೆಗಾಗಿ
*ದತ್ತಪದ. *ಹಳ್ಳಿ ಜೀವನ*
*ನಗರಜೀವನ*
*ಸ್ವಚ್ಛ ಸುಂದರ*
ಸ್ವಚ್ಛ ಸುಂದರ ಹಸಿರು ಪರಿಸರ
ಶುದ್ಧ ಗಾಳಿ ನೀರಿನ ಆಗರ
ಹಳ್ಳಿ ಜೀವನದ ಸುಂದರ ಚಿತ್ರಣ
ಪ್ರೀತಿ ವಿಶ್ವಾಸ ಬಂಧುರದ ತಾಣ
*ಒತ್ರಡದ ಜೀವನ*
ನಗರದ ಜೀವನದಲ್ಲಿ ತುಂಬಿದೆ ಒತ್ತಡ
ಎಲ್ಲಿ ನೋಡಿದರಲ್ಲಿ ಕಾಂಕ್ರೀಟ್ ಕಟ್ಟಡ
ಧಾವಂತದ ಬದುಕಿನಲ್ಲಿ ನಿಲ್ಲದ ಓಡಾಟ
ದಿನನಿತ್ಯ ಒಂದಲ್ಲ ಒಂದು ಕಾದಾಟ
*ಪಂಕಜಾ.ಕೆ ಮುಡಿಪು*
[18/9/2022, 4:09 pm] Pankaja K: ಗುರುಕುಲಾ ಕೊಡಗು ಘಟಕ
ಸ್ಪರ್ಧೆಗಾಗಿ. ಭಕ್ತಿಗೀತೆ
ದತ್ತಸಾಲು. ಕುಣಿಯುತ ನಲಿಯುತ ಬಾ ಶಂಕರ
*ಗಿರಿಜಾರಮಣ*
ಜಗದಲಿ ನಿನ್ನಯ ಮಹಿಮೆಯ ಪೊಗಳುವ
ಜಗದಾದಿ ಒಡೆಯ ಶಿವ ಶಂಕರ
ಮಗುವಿನ ಮಾತನು ಸೊಗದಲಿ ಕೇಳುತ
ಬಗೆ ಬಗೆಯಲಿ ನೀ ಅನುಗ್ರಹಿಸು
ನಂಬಿದೆ ನಿನ್ನನು ಕೈಲಾಸವಾಸಿ
ಇಂಬನು ಕೊಡು ನೀ ಗಿರಿಜಾರಮಣ
ಕಂಬು ಕಂಠನೇ ನಾಗಾಭರಣನೆ
ಹಂಬಲಿಸಿ ಬೇಡುವೆ ನಿನ್ನ ಶಶಿಭೂಷಣ
ಹೆಣೆಯುತ ಅರ್ಪಿಸುವೆ ಬಿಲ್ವದ ಮಾಲೆಯನು
ಕುಣಿಯುತ ನಲಿಯುತ ಬಾ ಶಂಕರ
ಮಣಿಯುವೆ ನಿನ್ನಯ ಚರಣಕೆ ನಾನು
ತಣಿಸೆನ್ನ ಕಾಮನೆಯ ಹರಸುತ ನೀನು
ನಂದಿವಾಹನ ನಂದಿಕೇಶನೇ
ಕುಂದು ಕೊರತೆಯು ಬಾರದಂತೆಯೇ
ನೊಂದಿರುವ ಮನವ ತಣಿಸುತ
ಕಂದನಂತೆನ್ನ ಕಾಯು ನೀ ಭಕ್ತವತ್ಸಲನೆ
*ಪಂಕಜಾ.ಕೆ. ಮುಡಿಪು*
Comments
Post a Comment