Skip to main content

ಭಕ್ತಿಗೀತೆ

[4/9/2022, 7:50 pm] Pankaja K: ಗುರುಕುಲಾ ಕೊಡಗು ಘಟಕ
ಚಿತ್ರಕ್ಕೊಂದು ಕವನ

*ವರುಣಾಘಾತ*

ಕೊಳೆಯನು ತೊಳೆಯುತ ಭರದಲಿ ಬರುತಲಿ
ಮಳೆಯದು ಸುರಿಯಿತು ಬಿರುಸಿನಲಿ
ಹೊಳೆಯಂತಾಯಿತು  ರಸ್ತೆಗಳೆಲ್ಲವು
ಕಾಂಕ್ರೀಟ್ ಕಾಡಿನ ಮಧ್ಯದಲಿ

ರಸ್ತೆಗಳೆಲ್ಲವೂ ನೀರಲಿ ಮುಳುಗಲು
ದಾರಿಯು  ಕಾಣದೆ  ಬಳಲಿದರು
ನೀರಿನ ಮೇಲೆಯೇ  ವಾಹನ ಓಡಿಸಲು
ಸರ್ಕಸ್  ಮಾಡುತ ದಣಿಯುವರು

ಹಸಿರಿನ ಗುಡ್ಡ ಕಾಡನು ಕಡಿಯುತ
ಕಟ್ಟಿದ ಕಾಂಕ್ರಿಟ್  ಕಾಡುಗಳನು
ಸುರಿಯುವ  ನೀರಿಗೆ  ಹರಿಯಲು ಆಗದೆ
ಕೊಚ್ಚಿತು  ಮನೆ ಮಠಗಳನು

ಮನುಜನೆ ತಿಳಿ ನೀ ಕಾಡುಗಳಿದ್ದರೆ
ನಮ್ಮಯ ಜೀವನ  ಸುಸೂತ್ರವು
ಪ್ರಕೃತಿಯ ಸಿರಿಯನು ಹಾಳುಗೆಡವದೆ
ಉಳಿಸುತಲಿರೆ  ಜೀವನ ಪಾವನವು

*ಪಂಕಜಾ.ಕೆ ಮುಡಿಪು*
[11/9/2022, 2:13 pm] Pankaja K: *ಗುರುಕುಲಾ ಕೊಡಗು ಘಟಕ*
*ಸ್ಪರ್ಧೆಗಾಗಿ* **ರುಬಾಯಿ*

*ದತ್ತಪದ ನಗು*

ನಗು ತುಂಬಿರುವ ಮುಖದ  ಕಳೆ
ಹುಲುಸಾಗಿ ಬೆಳೆದಿರುವ  ಬೆಳೆ
ಮನದ ನೋವು ಮರೆವ ಔಷಧಿ
ಮನೆ ಮನಕೆ ಸಂತಸದ ಹೊಳೆ 

*ಪ್ರತಿ ಸಾಲಿನಲ್ಲೂ 11 ಅಕ್ಷರವಿದೆ*

*ಪಂಕಜಾ.ಕೆ ಮುಡಿಪು*
[11/9/2022, 2:54 pm] Pankaja K: ಗುರುಕುಲಾ ಚಿಕ್ಕಮಗಳೂರು 
ಚುಟುಕು ಸ್ಪರ್ಧೆಗಾಗಿ

 *ದತ್ತಪದ.   *ಹಳ್ಳಿ ಜೀವನ*
*ನಗರಜೀವನ*

*ಸ್ವಚ್ಛ ಸುಂದರ*

ಸ್ವಚ್ಛ ಸುಂದರ ಹಸಿರು ಪರಿಸರ 
ಶುದ್ಧ ಗಾಳಿ  ನೀರಿನ   ಆಗರ
ಹಳ್ಳಿ ಜೀವನದ ಸುಂದರ ಚಿತ್ರಣ
ಪ್ರೀತಿ ವಿಶ್ವಾಸ ಬಂಧುರದ ತಾಣ 

*ಒತ್ರಡದ ಜೀವನ*

ನಗರದ ಜೀವನದಲ್ಲಿ  ತುಂಬಿದೆ  ಒತ್ತಡ
ಎಲ್ಲಿ ನೋಡಿದರಲ್ಲಿ ಕಾಂಕ್ರೀಟ್ ಕಟ್ಟಡ
ಧಾವಂತದ  ಬದುಕಿನಲ್ಲಿ ನಿಲ್ಲದ ಓಡಾಟ
ದಿನನಿತ್ಯ  ಒಂದಲ್ಲ ಒಂದು ಕಾದಾಟ
*ಪಂಕಜಾ.ಕೆ ಮುಡಿಪು*
[18/9/2022, 4:09 pm] Pankaja K: ಗುರುಕುಲಾ ಕೊಡಗು ಘಟಕ
ಸ್ಪರ್ಧೆಗಾಗಿ.   ಭಕ್ತಿಗೀತೆ
ದತ್ತಸಾಲು. ಕುಣಿಯುತ ನಲಿಯುತ ಬಾ ಶಂಕರ

*ಗಿರಿಜಾರಮಣ*

ಜಗದಲಿ ನಿನ್ನಯ ಮಹಿಮೆಯ ಪೊಗಳುವ
ಜಗದಾದಿ ಒಡೆಯ ಶಿವ ಶಂಕರ
ಮಗುವಿನ ಮಾತನು ಸೊಗದಲಿ ಕೇಳುತ
ಬಗೆ ಬಗೆಯಲಿ ನೀ ಅನುಗ್ರಹಿಸು

ನಂಬಿದೆ ನಿನ್ನನು ಕೈಲಾಸವಾಸಿ
ಇಂಬನು ಕೊಡು ನೀ ಗಿರಿಜಾರಮಣ
ಕಂಬು ಕಂಠನೇ ನಾಗಾಭರಣನೆ
ಹಂಬಲಿಸಿ ಬೇಡುವೆ ನಿನ್ನ ಶಶಿಭೂಷಣ

ಹೆಣೆಯುತ ಅರ್ಪಿಸುವೆ  ಬಿಲ್ವದ  ಮಾಲೆಯನು
ಕುಣಿಯುತ ನಲಿಯುತ ಬಾ ಶಂಕರ
ಮಣಿಯುವೆ ನಿನ್ನಯ ಚರಣಕೆ ನಾನು
ತಣಿಸೆನ್ನ ಕಾಮನೆಯ ಹರಸುತ ನೀನು

ನಂದಿವಾಹನ ನಂದಿಕೇಶನೇ
ಕುಂದು ಕೊರತೆಯು ಬಾರದಂತೆಯೇ
ನೊಂದಿರುವ ಮನವ ತಣಿಸುತ
ಕಂದನಂತೆನ್ನ ಕಾಯು ನೀ ಭಕ್ತವತ್ಸಲನೆ

*ಪಂಕಜಾ.ಕೆ. ಮುಡಿಪು*

Comments

Popular posts from this blog

ಚಂದಿರ ಕವನ

ಚಂದಿರ ಕಾರಿರುಳ  ರಾತ್ರಿಯಲಿ ಮೋಡದ ಮರೆಯಿಂದ ಇಣುಕುತ ಬರುತಿಹನು ಬೆಳ್ಳಿಯತಟ್ಟೆಯ ತರದಲಿ ತೇಲುತ ತಾರೆಗಳನೊಡನಾಡುತ ಬರುತಿಹನು ರಸಿಕರ ಎದೆಯಲಿ ಕನಸನು ತುಂಬುತ ಮೈಮನಕೆಲ್ಲಾ ತಂಪನು ತರುತಿಹನು ಒಲವರಸವನು ಹರಿಸುತ ಮನದಲಿ ಸಂತಸ ಸಂಭ್ರಮ ತುಂಬುವನು ಬಾನಲಿಇಣುಕುವ ಚಂದ್ರನ ಕಂಡು ತನ್ನೊಡನಾಡಲು ಬರುವನು ಎಂದು ನೈದಿಲೆ ಮೊಗವನು ಅರಳಿಸಿತು ಮುಗ್ದ ಮಗುವಿನ ತೆರದಲಿ ನಗುತ ಜೀವಕೆ ಉಲ್ಲಾಸವ ತುಂಬುವನು ಮೋಡದ ಮರೆಯಲಿ ಇಣುಕುವ ಚಂದ್ರನ ಕಾಣುತ ನನ್ನನು ನಾನೇ ಮರೆಯುವೆನು ಪಂಕಜಾ.ಕೆ

ರಕ್ತದಾನ ಕವನ ಮತ್ತು ವಿಮರ್ಶೆ

[04/07, 8:09 PM] pankajarambhat: ರಕ್ತದಾನ ಅವಸರದ ಕ್ಷಣಗಳಲಿ ಅಪಘಾತಗಳ ಸುಳಿಯಲಿ ಕಳೆದು ಕೊಂಡಿಹ ರಕ್ತ ತುಂಬಿಸಲು ಬಲು ಕಷ್ಟ ಮಾನವ ಜೀವನ ಅನಿತ್ಯ ರಕ್ತದಾನವೊಂದೇ ಸತ್ಯ ಉಸಿರು ಉಳಿಸುವ ಶಕ್ತಿ ರಕ್ತದಾನಿಯ ಬುತ್ತಿ ಮಾನವತೆಯ ಬಂಧ ರಕ್ತದಾನ ದ ಅನುಬಂಧ ರಕ್ತದಾನ ಒಂದು ಮಹಾದಾನ ಆರೋಗ್ಯ ಭಾಗ್ಯದ ಪಾನ ಬಡವ ಬಲ್ಲಿದ ಭೇಧವಿಲ್ಲ ಜಾತಿ ವಿಜಾತಿಗಳ ಲೆಕ್ಕವಿಲ್ಲ ಹರಿವುದೊಂದೇ ರಕ್ತ ಮನುಜ ಇದರಿಂದ ಶಕ್ತ ರಕ್ತವೆನ್ನುವ ಅಮೃತ ಅದಿಲ್ಲದಿರೆ ಮನುಜ ಮೃತ ರಕ್ತದಾನವ ಮಾಡಬೇಕು ಇನ್ನೊಬ್ಬರ ಪ್ರಾಣ ಉಳಿಸಬೇಕು  ದಾನ ಮಾಡಿದ ರಕ್ತ ತುಂಬುವುದು ನಿತ್ಯ ಬೇಕಿಲ್ಲ ಇದರಲ್ಲಿಭಯ ಉಳಿಸಬೇಕು ನೊಂದಜೀವ ಮಾಡಿ ಬಿಡು ರಕ್ತದಾನ ಕೊಟ್ಟುಬಿಡು ಜೀವದಾನ ಬೇರಿಲ್ಲಇದಕೆ ಸಾಟಿಯದ ದಾನ ರಕ್ತದಾನವೊಂದು ಮಹಾದಾನ ಉಸಿರು ಹೋಗುವ ಮುನ್ನ ಮಾಡಿಬಿಡು ರಕ್ತದಾನ ಸ್ವ ಇಚ್ಛೆಯಿಂದ ಕೊಟ್ಟ ದಾನ  ಕೊಟ್ಟೀತು ಮನಕೆ  ಸಮಾಧಾನ ಪಂಕಜಾ.ಕೆ. ಮುಡಿಪು [04/07, 8:28 PM] +91 94493 26765: ರಕ್ತ ದಾನ ಜೀವವನ್ನೆ ಉಳಿಸುತ್ತೆ ಇದಕ್ಕಿಂದ ಬೇರೆ ದಾನ ಬೇಕೆ. ಸುಂದರ ಕವನ 💐🙏🏻 [04/07, 8:47 PM] +91 96638 12303: ರಕ್ತದಾನದ ಮೇಲೆ ಬರೆದ ಕವನ ಅರ್ಥವತ್ತಾಗಿ,  ಸಂದೇಶಭರಿತವಾಗಿದೆ. ಅಭಿನಂದನೆಗಳು ಮೇಡಂ [04/07, 9:20 PM] +91 72595 69643: ರಕ್ತದಾನ ಜೀವದಾನ. ನೀವು ಬರೆದ ಸಾಲುಗಳು ಅದೆಷ್ಟು ಜೀವಿಗಳನ್ನು ಕಾಪಾಡುವ ಮಾನವೀಯತೆ, ಸೌಜನ್ಯತೆ ಮತ್ತು ಸಹಾಯ ಗುಣಗಳು ಎದ್ದು ಕಾಣುತ್

ಮಗು..ನಗು

ಮಗು...ನಗು ಅರಳಿದೆ ತನುವು ನಿನ್ನೊಲವ ಸವಿದು ಸಂತಸದ ಹೊನಲು ಹರಿಯುತ್ತಿದೆಇಂದು ಒಲವಿನಾ ಬಳ್ಳಿಯು ಚಿಗುರುತಿದೆ ನಮ್ಮೊಲವಿಗೆ ಸಾಕ್ಷಿಯಾಗಿ ನಗುತಿದೆ ಮನದಲಿ  ಮುದ ತುಂಬಿದೆ ಇನಿಯ ಒಡಲೆಲ್ಲಾಹರಿದಾಡಿನೀಡುವನು  ಕಚಗುಳಿಯ ಕಂದಮ್ಮ ಮನೆ ತುಂಬಾ ನಲಿದಾಡಿ ಕೊಡುವನು ಸಂತಸವ ಬಾಳೆಲ್ಲ ಹರಿದಾಡಿ ಮುದ್ದು ಮಗುವಿನ ಆಟ ಪಾಠ ತುಂಬಿದೆ ಮನೆಯಲಿ ಸಂತಸದ ಕೂಟ ಆತನ ಬಾಲ ಲೀಲೆಗಳೇನು ಚೆನ್ನ ನಂದಗೋಕುಲ ಮಗುವಿರುವ ಮನೆ ಚಿನ್ನ ಬಂಜೆಯೆಂಬ ಸೊಲ್ಲಡಗಿ ಸಂತಸವ ತಂದೆ ನಮ್ಮ ಬಾಳಿಗೆ ತುಂಬಿದ ಹರುಷವನಿಂದೆ ಸಾರ್ಥಕವಾಯಿತು ನನ್ನೀ ಬಾಳು ಇನ್ನಿಲ್ಲ ಮನದಲ್ಲಿ  ಎಂದು ಗೋಳು ಮನೆತುಂಬ ತುಂಬಿದೆ  ಅಳು ನಗು ಮನೆ ಒಳ ಹೊರಗೆಲ್ಲಾ ನಿನ್ನದೇ ಮಗು ನಗುತಿರು ಎಂದೆಂದೂ. ನನ್ನ  ಕಂದ ಬಾಳಲ್ಲಿ ತುಂಬಿರಲಿ ನಿತ್ಯ ಆನಂದ ಪಂಕಜಾ ಕೆ.