ಹನಿಕವನ
*ನಮ್ಮ ಸಂಸ್ಕಾರ*
ಮಾಡಬೇಕು ನಾವೆಲ್ಲಾ ಅತಿಥಿ ಸತ್ಕಾರ
ಅದುವೇ ನಮ್ಮ ಸಂಸ್ಕೃತಿಯ ಸಾರ
ಹಿಂದಿನಿಂದವೂ ಬಂದಿದೆ ಈ ಆಚಾರ ವಿಚಾರ
ಅತಿಥಿ ದೇವೋಭವ ಎನ್ನುವುದು ನಮ್ಮ ಸಂಸ್ಕಾರ
ಪ್ರೀತಿ ವಿಶ್ವಾಸ ಬಾಂಧವ್ಯ ಬೆಸೆಯಲು ಸಹಕಾರಿ
ಬಂಧು ಬಾಂಧವರೊಡನೆ ಭೇಟಿ ಹಿತಕಾರಿ
*ಪಂಕಜಾ.ಕೆ.
ಚುಟುಕು
ನಾವಿಕ
ಪೌರುಷಕ್ಕೆ ಹೆಸರೇ ಪುರುಷ
ಅವನಿದ್ದರೆ ಮನೆಯಲ್ಲಿ ಹರುಷ
ಬಾಳ ಬಂಡಿಯ ಪಯಣಕೆ ಜತೆಗಾರ
ಅವನಿಂದವೇ ಸುಂದರ ಸಂಸಾರ
ದತ
ತನಗ
ಅತಿಯಾದ ಮುಗ್ಧತೆ
ಇದ್ದರೆ ಅಪಾಯವು
ಮೋಸಕ್ಕೆ ಬಲಿಯಾಗಿ
ಬಾಳಾದೀತು ದುರ್ಭರ
*ಶ್ರೀಮತಿ.ಪಂಕಜಾ.ಕೆ. ಮುಡಿಪು*
ಕ ಅಕ್ಷರದಿಂದ ಪ್ರಾರಂಭವಾಗುವ ಕವನ
ದತ್ತಪದ ಕರುನಾಡು
ನಮ್ಮ ಕನ್ನಡ ನಾಡು
ಕರುನಾಡಿನ ಮಣ್ಣಲಿ ಇರುವುದು
ಕಂಗಳ ತುಂಬುವ ಹಸಿರುವನ
ಕಬ್ಬಿಗರುದಿಸಿದ ನಾಡಿದು ನಮ್ಮದು
ಕವಿ ಕೋಗಿಲೆಗಳು ಹಾಡಿಹರು
ಕಂದನ ತೊದಲಿನ ನುಡಿಯಿದು ಕನ್ನಡ
ಕಂಪನು ಬೀರಿದೆ ಎಲ್ಲೆಡೆಗೆ
ಕವಿಗಳ ಕಲ್ಪನೆ ಗರಿಗೆದರುತಲಿ
ಕನಸಲೂ ಮನಸಲೂ ಕಾಡುತಿದೆ
ಕಲೆಗಳ ನಾಡಿದು ಸುಂದರ ಬೀಡು
ಕಸಿಯುತಲಿರುವುದು ಸಕಲರನು
ಕಲಿಗಳು ಬಾಳಿದ ಹೆಮ್ಮೆಯ ನಾಡು
ಕರವನು ಮುಗಿಯುವ ಕನ್ನಡಮ್ಮನಿಗೆ
ಕಲರವ ಮಾಡುತ ನದಿಗಳು ಹರಿದಿವೆ
ಕನ್ನಂಬಾಡಿಯ ಕಟ್ಟೆಯಲಿ
ಕಣಕಣದಲ್ಲೂ ಕನ್ನಡ ತುಂಬುತ
ಕನ್ನಡ ತಾಯಿಯ ಕೀರ್ತಿಯ ಹರಡೋಣ
ಪಂಕಜಾ.ಕೆ. ಮುಡಿಪು
ಅಬಾಬಿ ರಚನಾ ಸ್ಪರ್ಧೆಗಾಗಿ
ವಿಷಯ..ಹದಿಹರೆಯ
ಹದಿಹರೆಯದಲ್ಲಿ
ಹಾದಿ ತಪ್ಪದಂತೆ
ಜಾಗ್ರತೆಯಿಂದಿರಬೇಕು
ಪಂಕಜಾರಾಮ
ಬಾಳು ಗೋಳಾಗದಿರಲಿ
ಪಂಕಜಾ.ಕೆ. ಮುಡಿಪು
[4/12/2022, 3:20 pm] Pankaja K: ಗುರುಕುಲಾ ಚಿಕ್ಕಮಗಳೂರು
ಸ್ಪರ್ಧೆಗಾಗಿ ಏಳೆ ಕವನ
ಅರಳಿದ ಕನಸು
ಚೆಲುವಿನ ತರುಣಿಯ ಒಲವಿನ ನೋಟಕೆ
ಚೆಲುವನ ಮನವು ಸೋತಿತ್ತು
ಬಳುಕುವ ನಡುವಿನ ತಳುಕಿನ ತರುಣಿಯು
ಕುಲುಕುತ ಬರಲು ಮುದವಿತ್ತು
ಹೊಸತನ ತುಂಬುತ ಕಸುವನು ಕೊಡುತಲಿ
ನಸುನಗು ತರಿಸಿ ಬಿಟ್ಟಿತ್ತು
ಕಣ್ಣಿನ ನೋಟಕೆ ಹೆಣ್ಣಿನ ಮೋಡಿಗೆ
ತನ್ನಯ ಮನವು ಸೋತಿತ್ತು
ಹಾಡುವ ಹಕ್ಕಿಯ ಹಾಡಿನ ರಾಗಕೆ
ಬಾಡಿದ ಮನವು ಅರಳಿತ್ತು
ಸುಂದರ ಕನಸಲಿ ಬಂಧಿಸಿ ಬಿಡುತಲಿ
ಮಂದಿಯ ಗಮನ ಸೆಳೆದಿತ್ತು
ನಲ್ಲೆಯ ನಗುವಿಗೆ ನಲ್ಲನ ಎದೆಯಲಿ
ಮೆಲ್ಲನೆ ಕನಸು ಅರಳಿತ್ತು
ಪಂಕಜಾ.ಕೆ. ಮುಡಿಪು
Comments
Post a Comment