Skip to main content

ಹಾನಿಕವನ ಇತ್ಯಾದಿ

ಹನಿಕವನ
*ನಮ್ಮ ಸಂಸ್ಕಾರ*

ಮಾಡಬೇಕು  ನಾವೆಲ್ಲಾ ಅತಿಥಿ ಸತ್ಕಾರ
ಅದುವೇ ನಮ್ಮ  ಸಂಸ್ಕೃತಿಯ ಸಾರ
ಹಿಂದಿನಿಂದವೂ ಬಂದಿದೆ ಈ ಆಚಾರ ವಿಚಾರ
ಅತಿಥಿ ದೇವೋಭವ ಎನ್ನುವುದು ನಮ್ಮ ಸಂಸ್ಕಾರ
ಪ್ರೀತಿ ವಿಶ್ವಾಸ ಬಾಂಧವ್ಯ ಬೆಸೆಯಲು ಸಹಕಾರಿ
ಬಂಧು ಬಾಂಧವರೊಡನೆ ಭೇಟಿ ಹಿತಕಾರಿ
*ಪಂಕಜಾ.ಕೆ.

ಚುಟುಕು

     ನಾವಿಕ

ಪೌರುಷಕ್ಕೆ ಹೆಸರೇ ಪುರುಷ
ಅವನಿದ್ದರೆ  ಮನೆಯಲ್ಲಿ  ಹರುಷ
ಬಾಳ ಬಂಡಿಯ ಪಯಣಕೆ   ಜತೆಗಾರ
ಅವನಿಂದವೇ ಸುಂದರ ಸಂಸಾರ
ದತ

ತನಗ

ಅತಿಯಾದ ಮುಗ್ಧತೆ
ಇದ್ದರೆ ಅಪಾಯವು
ಮೋಸಕ್ಕೆ ಬಲಿಯಾಗಿ
ಬಾಳಾದೀತು ದುರ್ಭರ

 *ಶ್ರೀಮತಿ.ಪಂಕಜಾ.ಕೆ. ಮುಡಿಪು*


 ಕ ಅಕ್ಷರದಿಂದ ಪ್ರಾರಂಭವಾಗುವ ಕವನ
ದತ್ತಪದ ಕರುನಾಡು

ನಮ್ಮ ಕನ್ನಡ ನಾಡು

ಕರುನಾಡಿನ ಮಣ್ಣಲಿ  ಇರುವುದು
ಕಂಗಳ ತುಂಬುವ ಹಸಿರುವನ
ಕಬ್ಬಿಗರುದಿಸಿದ  ನಾಡಿದು ನಮ್ಮದು
ಕವಿ ಕೋಗಿಲೆಗಳು ಹಾಡಿಹರು

ಕಂದನ ತೊದಲಿನ ನುಡಿಯಿದು ಕನ್ನಡ
ಕಂಪನು ಬೀರಿದೆ ಎಲ್ಲೆಡೆಗೆ
ಕವಿಗಳ ಕಲ್ಪನೆ ಗರಿಗೆದರುತಲಿ
ಕನಸಲೂ ಮನಸಲೂ ಕಾಡುತಿದೆ

ಕಲೆಗಳ  ನಾಡಿದು ಸುಂದರ ಬೀಡು
ಕಸಿಯುತಲಿರುವುದು ಸಕಲರನು
ಕಲಿಗಳು ಬಾಳಿದ ಹೆಮ್ಮೆಯ ನಾಡು
ಕರವನು ಮುಗಿಯುವ ಕನ್ನಡಮ್ಮನಿಗೆ

ಕಲರವ ಮಾಡುತ ನದಿಗಳು ಹರಿದಿವೆ
ಕನ್ನಂಬಾಡಿಯ ಕಟ್ಟೆಯಲಿ
ಕಣಕಣದಲ್ಲೂ ಕನ್ನಡ ತುಂಬುತ
ಕನ್ನಡ  ತಾಯಿಯ ಕೀರ್ತಿಯ  ಹರಡೋಣ

ಪಂಕಜಾ.ಕೆ. ಮುಡಿಪು

ಅಬಾಬಿ ರಚನಾ ಸ್ಪರ್ಧೆಗಾಗಿ
ವಿಷಯ..ಹದಿಹರೆಯ

ಹದಿಹರೆಯದಲ್ಲಿ
ಹಾದಿ ತಪ್ಪದಂತೆ
ಜಾಗ್ರತೆಯಿಂದಿರಬೇಕು
ಪಂಕಜಾರಾಮ
ಬಾಳು ಗೋಳಾಗದಿರಲಿ

ಪಂಕಜಾ.ಕೆ. ಮುಡಿಪು
[4/12/2022, 3:20 pm] Pankaja K: ಗುರುಕುಲಾ ಚಿಕ್ಕಮಗಳೂರು 

ಸ್ಪರ್ಧೆಗಾಗಿ  ಏಳೆ ಕವನ


   ಅರಳಿದ ಕನಸು 

ಚೆಲುವಿನ ತರುಣಿಯ  ಒಲವಿನ ನೋಟಕೆ
ಚೆಲುವನ  ಮನವು ಸೋತಿತ್ತು

ಬಳುಕುವ  ನಡುವಿನ ತಳುಕಿನ  ತರುಣಿಯು
ಕುಲುಕುತ  ಬರಲು   ಮುದವಿತ್ತು

ಹೊಸತನ ತುಂಬುತ ಕಸುವನು ಕೊಡುತಲಿ
ನಸುನಗು  ತರಿಸಿ ಬಿಟ್ಟಿತ್ತು

ಕಣ್ಣಿನ ನೋಟಕೆ ಹೆಣ್ಣಿನ ಮೋಡಿಗೆ
ತನ್ನಯ ಮನವು ಸೋತಿತ್ತು

ಹಾಡುವ ಹಕ್ಕಿಯ ಹಾಡಿನ ರಾಗಕೆ 
ಬಾಡಿದ ಮನವು ಅರಳಿತ್ತು

ಸುಂದರ  ಕನಸಲಿ ಬಂಧಿಸಿ ಬಿಡುತಲಿ
ಮಂದಿಯ ಗಮನ ಸೆಳೆದಿತ್ತು

ನಲ್ಲೆಯ ನಗುವಿಗೆ  ನಲ್ಲನ ಎದೆಯಲಿ
ಮೆಲ್ಲನೆ ಕನಸು ಅರಳಿತ್ತು

ಪಂಕಜಾ.ಕೆ. ಮುಡಿಪು

Comments

Popular posts from this blog

ಚಂದಿರ ಕವನ

ಚಂದಿರ ಕಾರಿರುಳ  ರಾತ್ರಿಯಲಿ ಮೋಡದ ಮರೆಯಿಂದ ಇಣುಕುತ ಬರುತಿಹನು ಬೆಳ್ಳಿಯತಟ್ಟೆಯ ತರದಲಿ ತೇಲುತ ತಾರೆಗಳನೊಡನಾಡುತ ಬರುತಿಹನು ರಸಿಕರ ಎದೆಯಲಿ ಕನಸನು ತುಂಬುತ ಮೈಮನಕೆಲ್ಲಾ ತಂಪನು ತರುತಿಹನು ಒಲವರಸವನು ಹರಿಸುತ ಮನದಲಿ ಸಂತಸ ಸಂಭ್ರಮ ತುಂಬುವನು ಬಾನಲಿಇಣುಕುವ ಚಂದ್ರನ ಕಂಡು ತನ್ನೊಡನಾಡಲು ಬರುವನು ಎಂದು ನೈದಿಲೆ ಮೊಗವನು ಅರಳಿಸಿತು ಮುಗ್ದ ಮಗುವಿನ ತೆರದಲಿ ನಗುತ ಜೀವಕೆ ಉಲ್ಲಾಸವ ತುಂಬುವನು ಮೋಡದ ಮರೆಯಲಿ ಇಣುಕುವ ಚಂದ್ರನ ಕಾಣುತ ನನ್ನನು ನಾನೇ ಮರೆಯುವೆನು ಪಂಕಜಾ.ಕೆ

ರಕ್ತದಾನ ಕವನ ಮತ್ತು ವಿಮರ್ಶೆ

[04/07, 8:09 PM] pankajarambhat: ರಕ್ತದಾನ ಅವಸರದ ಕ್ಷಣಗಳಲಿ ಅಪಘಾತಗಳ ಸುಳಿಯಲಿ ಕಳೆದು ಕೊಂಡಿಹ ರಕ್ತ ತುಂಬಿಸಲು ಬಲು ಕಷ್ಟ ಮಾನವ ಜೀವನ ಅನಿತ್ಯ ರಕ್ತದಾನವೊಂದೇ ಸತ್ಯ ಉಸಿರು ಉಳಿಸುವ ಶಕ್ತಿ ರಕ್ತದಾನಿಯ ಬುತ್ತಿ ಮಾನವತೆಯ ಬಂಧ ರಕ್ತದಾನ ದ ಅನುಬಂಧ ರಕ್ತದಾನ ಒಂದು ಮಹಾದಾನ ಆರೋಗ್ಯ ಭಾಗ್ಯದ ಪಾನ ಬಡವ ಬಲ್ಲಿದ ಭೇಧವಿಲ್ಲ ಜಾತಿ ವಿಜಾತಿಗಳ ಲೆಕ್ಕವಿಲ್ಲ ಹರಿವುದೊಂದೇ ರಕ್ತ ಮನುಜ ಇದರಿಂದ ಶಕ್ತ ರಕ್ತವೆನ್ನುವ ಅಮೃತ ಅದಿಲ್ಲದಿರೆ ಮನುಜ ಮೃತ ರಕ್ತದಾನವ ಮಾಡಬೇಕು ಇನ್ನೊಬ್ಬರ ಪ್ರಾಣ ಉಳಿಸಬೇಕು  ದಾನ ಮಾಡಿದ ರಕ್ತ ತುಂಬುವುದು ನಿತ್ಯ ಬೇಕಿಲ್ಲ ಇದರಲ್ಲಿಭಯ ಉಳಿಸಬೇಕು ನೊಂದಜೀವ ಮಾಡಿ ಬಿಡು ರಕ್ತದಾನ ಕೊಟ್ಟುಬಿಡು ಜೀವದಾನ ಬೇರಿಲ್ಲಇದಕೆ ಸಾಟಿಯದ ದಾನ ರಕ್ತದಾನವೊಂದು ಮಹಾದಾನ ಉಸಿರು ಹೋಗುವ ಮುನ್ನ ಮಾಡಿಬಿಡು ರಕ್ತದಾನ ಸ್ವ ಇಚ್ಛೆಯಿಂದ ಕೊಟ್ಟ ದಾನ  ಕೊಟ್ಟೀತು ಮನಕೆ  ಸಮಾಧಾನ ಪಂಕಜಾ.ಕೆ. ಮುಡಿಪು [04/07, 8:28 PM] +91 94493 26765: ರಕ್ತ ದಾನ ಜೀವವನ್ನೆ ಉಳಿಸುತ್ತೆ ಇದಕ್ಕಿಂದ ಬೇರೆ ದಾನ ಬೇಕೆ. ಸುಂದರ ಕವನ 💐🙏🏻 [04/07, 8:47 PM] +91 96638 12303: ರಕ್ತದಾನದ ಮೇಲೆ ಬರೆದ ಕವನ ಅರ್ಥವತ್ತಾಗಿ,  ಸಂದೇಶಭರಿತವಾಗಿದೆ. ಅಭಿನಂದನೆಗಳು ಮೇಡಂ [04/07, 9:20 PM] +91 72595 69643: ರಕ್ತದಾನ ಜೀವದಾನ. ನೀವು ಬರೆದ ಸಾಲುಗಳು ಅದೆಷ್ಟು ಜೀವಿಗಳನ್ನು ಕಾಪಾಡುವ ಮಾನವೀಯತೆ, ಸೌಜನ್ಯತೆ ಮತ್ತು ಸಹಾಯ ಗುಣಗಳು ಎದ್ದು ಕಾಣುತ್

ಮಗು..ನಗು

ಮಗು...ನಗು ಅರಳಿದೆ ತನುವು ನಿನ್ನೊಲವ ಸವಿದು ಸಂತಸದ ಹೊನಲು ಹರಿಯುತ್ತಿದೆಇಂದು ಒಲವಿನಾ ಬಳ್ಳಿಯು ಚಿಗುರುತಿದೆ ನಮ್ಮೊಲವಿಗೆ ಸಾಕ್ಷಿಯಾಗಿ ನಗುತಿದೆ ಮನದಲಿ  ಮುದ ತುಂಬಿದೆ ಇನಿಯ ಒಡಲೆಲ್ಲಾಹರಿದಾಡಿನೀಡುವನು  ಕಚಗುಳಿಯ ಕಂದಮ್ಮ ಮನೆ ತುಂಬಾ ನಲಿದಾಡಿ ಕೊಡುವನು ಸಂತಸವ ಬಾಳೆಲ್ಲ ಹರಿದಾಡಿ ಮುದ್ದು ಮಗುವಿನ ಆಟ ಪಾಠ ತುಂಬಿದೆ ಮನೆಯಲಿ ಸಂತಸದ ಕೂಟ ಆತನ ಬಾಲ ಲೀಲೆಗಳೇನು ಚೆನ್ನ ನಂದಗೋಕುಲ ಮಗುವಿರುವ ಮನೆ ಚಿನ್ನ ಬಂಜೆಯೆಂಬ ಸೊಲ್ಲಡಗಿ ಸಂತಸವ ತಂದೆ ನಮ್ಮ ಬಾಳಿಗೆ ತುಂಬಿದ ಹರುಷವನಿಂದೆ ಸಾರ್ಥಕವಾಯಿತು ನನ್ನೀ ಬಾಳು ಇನ್ನಿಲ್ಲ ಮನದಲ್ಲಿ  ಎಂದು ಗೋಳು ಮನೆತುಂಬ ತುಂಬಿದೆ  ಅಳು ನಗು ಮನೆ ಒಳ ಹೊರಗೆಲ್ಲಾ ನಿನ್ನದೇ ಮಗು ನಗುತಿರು ಎಂದೆಂದೂ. ನನ್ನ  ಕಂದ ಬಾಳಲ್ಲಿ ತುಂಬಿರಲಿ ನಿತ್ಯ ಆನಂದ ಪಂಕಜಾ ಕೆ.