Skip to main content

ಹನಿಕವನ ಚುಟುಕು


ಸ್ಪರ್ಧೆಗಾಗಿ  ಚಿತ್ರಕ್ಕೊಂದು ಹನಿಕವನ

ಹಬ್ಬದ ಸಂಭ್ರಮ

ಕಬ್ಬಿನ ಜಲ್ಲೆಯ ತಲೆಯ ಮೇಲೆ  ಹೊರುತ
ಹಬ್ಬದ ಸಾಮಾನುಗಳ ಬೈಸಿಕಲ್ನಲ್ಲಿ ಹೇರುತ
ಸಂಕ್ರಾಂತಿ ಹಬ್ಬವಾಚರಿಸುವ ಹುಮ್ಮಸ್ಸು  ತುಂಬುತ
ಹೊರಟನು ಮನೆಯೆಡೆ ಗಾಡಿಯ ತುಳಿಯುತ

ಎಳ್ಳು ಬೆಲ್ಲವ  ಬೀರುವ ಸಂಭ್ರಮದ  ಹಬ್ಬ 
ತೊಟ್ಟಿರುವನು ಗುಲಾಬಿ ರಂಗಿನ ಹೊಸ ಜುಬ್ಬ
ಹಬ್ಬದ ಸಂತಸಕೆ ತಂದನು  ಸಿಹಿತಿಂಡಿಯ ಡಬ್ಬ
ಹುರುಪಿನಲಿ ಸಾಗಿಹನು ಹತ್ತಿ ಇಳಿಯುತ ದಿಬ್ಬ

ಪಂಕಜಾ.ಕೆ. ರಾಮಭಟ್

 ಚುಟುಕು
ದತ್ತಪದ ಸಂಕ್ರಾಂತಿ
 
ಉತ್ತರಾಯಣದ ಪುಣ್ಯಕಾಲ

ರವಿಯು ಬದಲಿಸಿದ ತನ್ನ ರಥದ ಚಲನ
ಮಾಗಿಯ ಚಳಿ ಕಳೆದು ಬಿಸಿಲಿನಾಗಮನ
ಉತ್ತರಾಯಣದ ಪುಣ್ಯಕಾಲವಿದು ಸಂಕ್ರಾಂತಿ
ಮೈಮನದ ಜಡತೆ  ಕಳೆದು ತುಂಬಿತು ಹೊಸ ಕಾಂತಿ

ಪಂಕಜಾ.ಕೆ.ರಾಮಭಟ್.ಮುಡಿಪು
[

       ನನ್ನವಳು

     ನನ್ನಾಕೆ  ನನ್ನ ಮನೆ ಮನದ ಒಡತಿ
     ಇವಳಿಲ್ಲದಿರೆ  ನನ್ನ ಬಾಳು ಅವನತಿ
     ನನ್ನ ಹೃದಯದ ರಾಣಿ ಅವಳು
     ಮಕ್ಕಳ ನೆಚ್ಚಿನ ತಾಯಿ ಅವಳು
     ಅನ್ನಪೂರ್ಣೇಶ್ವರಿ ದೇವಿ ಆಕೆ
     ನನ್ನ ಹೆಂಡತಿ ನನಗೊಂದು ಕೊಡುಗೆ
     
     ಪಂಕಜಾ. ಕೆ ರಾಮಭಟ್ .ಮುಡಿಪು
[

ಸ್ಪರ್ಧೆಗಾಗಿ ಟಂಕಾ

ದತ್ತಪದ. ಕ್ಷಣಿಕ

ಕ್ಷಣಿಕ ಸುಖ 
ಮೈ ಮರೆವು ಅಪಾಯ
ಎಚ್ಚರಬೇಕು
ಬಾಳು ಗೋಳಾಗದಂತೆ
 ಜಾಗ್ರತೆಯಿರಬೇಕು

ಪಂಕಜಾ.ಕೆ. ರಾಮಭಟ್.ಮುಡಿಪು


ಹನಿಗವನ

ಮಹಾನ್ ನಾಯಕ

ಸಂವಿಧಾನ ಶಿಲ್ಪಿ  ಅಂಬೇಡ್ಕರರು
ಸಮಾನತೆಯ ಹರಿಕಾರರು
ಸಧೃಢ ಭಾರತದ ಕನಸು ಕಂಡವರು
ಬಡವರ ಶೋಷಣೆಗೆ ಧ್ವನಿಯೆತ್ತಿದವರು
ನಮ್ಮ ದೇಶದ  ಮಹಾನ್ ನಾಯಕರು
ಹಿಂದುಳಿದವರ  ಏಳಿಗೆಗಾಗಿ ದುಡಿದವರು

ಪಂಕಜಾ.ಕೆ. ರಾಮಭಟ್.ಮುಡಿಪು


ಮಮತೆಯ ಮಾತೆ

ಅಮ್ಮ ನೀನು  ನಮ್ಮ ಜೀವದಾತೆ
ಹೊತ್ತು ಹೆತ್ತು ಸಾಕಿ ಸಲಹಿದ ದಾತೆ
ನಿನ್ನೆದೆಯ ಅಮೃತ ಉಣಿಸಿದ  ಮಾತೆ
ನೀನು ನಮ್ಮ ಬಾಳಿನ ಭಾಗ್ಯದಾತೆ
ಕಷ್ಟಗಳ ಸಹಿಸಿ ಹಡೆದ  ಜನ್ಮದಾತೆ
ಎಂದೆಂದೂ  ಋಣಿ ನೀ ನಮ್ಮ ಸೌಭಾಗ್ಯದಾತೆ 

ಪಂಕಜಾ. ಕೆ.  ರಾಮಭಟ್  ಮುಡಿಪು

Comments

Popular posts from this blog

ಚಂದಿರ ಕವನ

ಚಂದಿರ ಕಾರಿರುಳ  ರಾತ್ರಿಯಲಿ ಮೋಡದ ಮರೆಯಿಂದ ಇಣುಕುತ ಬರುತಿಹನು ಬೆಳ್ಳಿಯತಟ್ಟೆಯ ತರದಲಿ ತೇಲುತ ತಾರೆಗಳನೊಡನಾಡುತ ಬರುತಿಹನು ರಸಿಕರ ಎದೆಯಲಿ ಕನಸನು ತುಂಬುತ ಮೈಮನಕೆಲ್ಲಾ ತಂಪನು ತರುತಿಹನು ಒಲವರಸವನು ಹರಿಸುತ ಮನದಲಿ ಸಂತಸ ಸಂಭ್ರಮ ತುಂಬುವನು ಬಾನಲಿಇಣುಕುವ ಚಂದ್ರನ ಕಂಡು ತನ್ನೊಡನಾಡಲು ಬರುವನು ಎಂದು ನೈದಿಲೆ ಮೊಗವನು ಅರಳಿಸಿತು ಮುಗ್ದ ಮಗುವಿನ ತೆರದಲಿ ನಗುತ ಜೀವಕೆ ಉಲ್ಲಾಸವ ತುಂಬುವನು ಮೋಡದ ಮರೆಯಲಿ ಇಣುಕುವ ಚಂದ್ರನ ಕಾಣುತ ನನ್ನನು ನಾನೇ ಮರೆಯುವೆನು ಪಂಕಜಾ.ಕೆ

ರಕ್ತದಾನ ಕವನ ಮತ್ತು ವಿಮರ್ಶೆ

[04/07, 8:09 PM] pankajarambhat: ರಕ್ತದಾನ ಅವಸರದ ಕ್ಷಣಗಳಲಿ ಅಪಘಾತಗಳ ಸುಳಿಯಲಿ ಕಳೆದು ಕೊಂಡಿಹ ರಕ್ತ ತುಂಬಿಸಲು ಬಲು ಕಷ್ಟ ಮಾನವ ಜೀವನ ಅನಿತ್ಯ ರಕ್ತದಾನವೊಂದೇ ಸತ್ಯ ಉಸಿರು ಉಳಿಸುವ ಶಕ್ತಿ ರಕ್ತದಾನಿಯ ಬುತ್ತಿ ಮಾನವತೆಯ ಬಂಧ ರಕ್ತದಾನ ದ ಅನುಬಂಧ ರಕ್ತದಾನ ಒಂದು ಮಹಾದಾನ ಆರೋಗ್ಯ ಭಾಗ್ಯದ ಪಾನ ಬಡವ ಬಲ್ಲಿದ ಭೇಧವಿಲ್ಲ ಜಾತಿ ವಿಜಾತಿಗಳ ಲೆಕ್ಕವಿಲ್ಲ ಹರಿವುದೊಂದೇ ರಕ್ತ ಮನುಜ ಇದರಿಂದ ಶಕ್ತ ರಕ್ತವೆನ್ನುವ ಅಮೃತ ಅದಿಲ್ಲದಿರೆ ಮನುಜ ಮೃತ ರಕ್ತದಾನವ ಮಾಡಬೇಕು ಇನ್ನೊಬ್ಬರ ಪ್ರಾಣ ಉಳಿಸಬೇಕು  ದಾನ ಮಾಡಿದ ರಕ್ತ ತುಂಬುವುದು ನಿತ್ಯ ಬೇಕಿಲ್ಲ ಇದರಲ್ಲಿಭಯ ಉಳಿಸಬೇಕು ನೊಂದಜೀವ ಮಾಡಿ ಬಿಡು ರಕ್ತದಾನ ಕೊಟ್ಟುಬಿಡು ಜೀವದಾನ ಬೇರಿಲ್ಲಇದಕೆ ಸಾಟಿಯದ ದಾನ ರಕ್ತದಾನವೊಂದು ಮಹಾದಾನ ಉಸಿರು ಹೋಗುವ ಮುನ್ನ ಮಾಡಿಬಿಡು ರಕ್ತದಾನ ಸ್ವ ಇಚ್ಛೆಯಿಂದ ಕೊಟ್ಟ ದಾನ  ಕೊಟ್ಟೀತು ಮನಕೆ  ಸಮಾಧಾನ ಪಂಕಜಾ.ಕೆ. ಮುಡಿಪು [04/07, 8:28 PM] +91 94493 26765: ರಕ್ತ ದಾನ ಜೀವವನ್ನೆ ಉಳಿಸುತ್ತೆ ಇದಕ್ಕಿಂದ ಬೇರೆ ದಾನ ಬೇಕೆ. ಸುಂದರ ಕವನ 💐🙏🏻 [04/07, 8:47 PM] +91 96638 12303: ರಕ್ತದಾನದ ಮೇಲೆ ಬರೆದ ಕವನ ಅರ್ಥವತ್ತಾಗಿ,  ಸಂದೇಶಭರಿತವಾಗಿದೆ. ಅಭಿನಂದನೆಗಳು ಮೇಡಂ [04/07, 9:20 PM] +91 72595 69643: ರಕ್ತದಾನ ಜೀವದಾನ. ನೀವು ಬರೆದ ಸಾಲುಗಳು ಅದೆಷ್ಟು ಜೀವಿಗಳನ್ನು ಕಾಪಾಡುವ ಮಾನವೀಯತೆ, ಸೌಜನ್ಯತೆ ಮತ್ತು ಸಹಾಯ ಗುಣಗಳು ಎದ್ದು ಕಾಣುತ್

ಮಗು..ನಗು

ಮಗು...ನಗು ಅರಳಿದೆ ತನುವು ನಿನ್ನೊಲವ ಸವಿದು ಸಂತಸದ ಹೊನಲು ಹರಿಯುತ್ತಿದೆಇಂದು ಒಲವಿನಾ ಬಳ್ಳಿಯು ಚಿಗುರುತಿದೆ ನಮ್ಮೊಲವಿಗೆ ಸಾಕ್ಷಿಯಾಗಿ ನಗುತಿದೆ ಮನದಲಿ  ಮುದ ತುಂಬಿದೆ ಇನಿಯ ಒಡಲೆಲ್ಲಾಹರಿದಾಡಿನೀಡುವನು  ಕಚಗುಳಿಯ ಕಂದಮ್ಮ ಮನೆ ತುಂಬಾ ನಲಿದಾಡಿ ಕೊಡುವನು ಸಂತಸವ ಬಾಳೆಲ್ಲ ಹರಿದಾಡಿ ಮುದ್ದು ಮಗುವಿನ ಆಟ ಪಾಠ ತುಂಬಿದೆ ಮನೆಯಲಿ ಸಂತಸದ ಕೂಟ ಆತನ ಬಾಲ ಲೀಲೆಗಳೇನು ಚೆನ್ನ ನಂದಗೋಕುಲ ಮಗುವಿರುವ ಮನೆ ಚಿನ್ನ ಬಂಜೆಯೆಂಬ ಸೊಲ್ಲಡಗಿ ಸಂತಸವ ತಂದೆ ನಮ್ಮ ಬಾಳಿಗೆ ತುಂಬಿದ ಹರುಷವನಿಂದೆ ಸಾರ್ಥಕವಾಯಿತು ನನ್ನೀ ಬಾಳು ಇನ್ನಿಲ್ಲ ಮನದಲ್ಲಿ  ಎಂದು ಗೋಳು ಮನೆತುಂಬ ತುಂಬಿದೆ  ಅಳು ನಗು ಮನೆ ಒಳ ಹೊರಗೆಲ್ಲಾ ನಿನ್ನದೇ ಮಗು ನಗುತಿರು ಎಂದೆಂದೂ. ನನ್ನ  ಕಂದ ಬಾಳಲ್ಲಿ ತುಂಬಿರಲಿ ನಿತ್ಯ ಆನಂದ ಪಂಕಜಾ ಕೆ.