ಸ್ಪರ್ಧೆಗಾಗಿ ಚಿತ್ರಕ್ಕೊಂದು ಹನಿಕವನ
ಹಬ್ಬದ ಸಂಭ್ರಮ
ಕಬ್ಬಿನ ಜಲ್ಲೆಯ ತಲೆಯ ಮೇಲೆ ಹೊರುತ
ಹಬ್ಬದ ಸಾಮಾನುಗಳ ಬೈಸಿಕಲ್ನಲ್ಲಿ ಹೇರುತ
ಸಂಕ್ರಾಂತಿ ಹಬ್ಬವಾಚರಿಸುವ ಹುಮ್ಮಸ್ಸು ತುಂಬುತ
ಹೊರಟನು ಮನೆಯೆಡೆ ಗಾಡಿಯ ತುಳಿಯುತ
ಎಳ್ಳು ಬೆಲ್ಲವ ಬೀರುವ ಸಂಭ್ರಮದ ಹಬ್ಬ
ತೊಟ್ಟಿರುವನು ಗುಲಾಬಿ ರಂಗಿನ ಹೊಸ ಜುಬ್ಬ
ಹಬ್ಬದ ಸಂತಸಕೆ ತಂದನು ಸಿಹಿತಿಂಡಿಯ ಡಬ್ಬ
ಹುರುಪಿನಲಿ ಸಾಗಿಹನು ಹತ್ತಿ ಇಳಿಯುತ ದಿಬ್ಬ
ಪಂಕಜಾ.ಕೆ. ರಾಮಭಟ್
ಚುಟುಕು
ದತ್ತಪದ ಸಂಕ್ರಾಂತಿ
ಉತ್ತರಾಯಣದ ಪುಣ್ಯಕಾಲ
ರವಿಯು ಬದಲಿಸಿದ ತನ್ನ ರಥದ ಚಲನ
ಮಾಗಿಯ ಚಳಿ ಕಳೆದು ಬಿಸಿಲಿನಾಗಮನ
ಉತ್ತರಾಯಣದ ಪುಣ್ಯಕಾಲವಿದು ಸಂಕ್ರಾಂತಿ
ಮೈಮನದ ಜಡತೆ ಕಳೆದು ತುಂಬಿತು ಹೊಸ ಕಾಂತಿ
ಪಂಕಜಾ.ಕೆ.ರಾಮಭಟ್.ಮುಡಿಪು
[
ನನ್ನವಳು
ನನ್ನಾಕೆ ನನ್ನ ಮನೆ ಮನದ ಒಡತಿ
ಇವಳಿಲ್ಲದಿರೆ ನನ್ನ ಬಾಳು ಅವನತಿ
ನನ್ನ ಹೃದಯದ ರಾಣಿ ಅವಳು
ಮಕ್ಕಳ ನೆಚ್ಚಿನ ತಾಯಿ ಅವಳು
ಅನ್ನಪೂರ್ಣೇಶ್ವರಿ ದೇವಿ ಆಕೆ
ನನ್ನ ಹೆಂಡತಿ ನನಗೊಂದು ಕೊಡುಗೆ
ಪಂಕಜಾ. ಕೆ ರಾಮಭಟ್ .ಮುಡಿಪು
[
ಸ್ಪರ್ಧೆಗಾಗಿ ಟಂಕಾ
ದತ್ತಪದ. ಕ್ಷಣಿಕ
ಕ್ಷಣಿಕ ಸುಖ
ಮೈ ಮರೆವು ಅಪಾಯ
ಎಚ್ಚರಬೇಕು
ಬಾಳು ಗೋಳಾಗದಂತೆ
ಜಾಗ್ರತೆಯಿರಬೇಕು
ಪಂಕಜಾ.ಕೆ. ರಾಮಭಟ್.ಮುಡಿಪು
ಹನಿಗವನ
ಮಹಾನ್ ನಾಯಕ
ಸಂವಿಧಾನ ಶಿಲ್ಪಿ ಅಂಬೇಡ್ಕರರು
ಸಮಾನತೆಯ ಹರಿಕಾರರು
ಸಧೃಢ ಭಾರತದ ಕನಸು ಕಂಡವರು
ಬಡವರ ಶೋಷಣೆಗೆ ಧ್ವನಿಯೆತ್ತಿದವರು
ನಮ್ಮ ದೇಶದ ಮಹಾನ್ ನಾಯಕರು
ಹಿಂದುಳಿದವರ ಏಳಿಗೆಗಾಗಿ ದುಡಿದವರು
ಪಂಕಜಾ.ಕೆ. ರಾಮಭಟ್.ಮುಡಿಪು
ಮಮತೆಯ ಮಾತೆ
ಅಮ್ಮ ನೀನು ನಮ್ಮ ಜೀವದಾತೆ
ಹೊತ್ತು ಹೆತ್ತು ಸಾಕಿ ಸಲಹಿದ ದಾತೆ
ನಿನ್ನೆದೆಯ ಅಮೃತ ಉಣಿಸಿದ ಮಾತೆ
ನೀನು ನಮ್ಮ ಬಾಳಿನ ಭಾಗ್ಯದಾತೆ
ಕಷ್ಟಗಳ ಸಹಿಸಿ ಹಡೆದ ಜನ್ಮದಾತೆ
ಎಂದೆಂದೂ ಋಣಿ ನೀ ನಮ್ಮ ಸೌಭಾಗ್ಯದಾತೆ
ಪಂಕಜಾ. ಕೆ. ರಾಮಭಟ್ ಮುಡಿಪು
Comments
Post a Comment