Skip to main content

ರಾಮಕಥೆ ಭಾಗ 3

ರಾಮಕಥೆ 3
ಭಾಮಿನಿ ಷಟ್ಪದಿ
ಪಂಕಜಾ.ಕೆ. ರಾಮಭಟ್ 

ತನ್ನ ಮಕ್ಕಳ ತೆರದಿ ಸಾಕಿದ
ಚೆನ್ನ ರಾಮನ ಮುದ್ದು ಮಕ್ಕಳು 
ಚಿನ್ನ ಪುತ್ತಲಿಯಂತೆ ಹೊಳೆಯುತ
ಕಥೆಯನೊರೆಯುವರು
ಮುನ್ನ ಮಾಡಿದ ಪುಣ್ಯ ಫಲವಿದು
ಕಣ್ಣ  ತುಂಬುವ ಚೆಲುವ ಮೂರುತಿ -
-ಯನ್ನು  ಬಣ್ಣಿಸಿ  ಹಾಡಿ ಹೊಗಳುವ ಕಥೆಯ ಕೇಳುವುದು  

ದೇಶ  ಕೋಸಲದಲ್ಲಿ ದಶರಥ
ತೋಷದಿಂದಲಿ ಮಡದಿಯರೊಡನೆ
ಕ್ಲೇಶವಿಲ್ಲದೆ  ರಾಜ್ಯಭಾರವ ಮಾಡುತಿರುತಿದ್ದ
ವೇಷ ಹಾಕುವ ಜನರ ಮದ್ಯಧಿ
ದೇಶದೆಲ್ಲೆಡೆ  ಕವಿದ ಬೇಸರ
ಪಾಶದಂತೆಯೆ ಸೆಳೆದು ಬಿಡುತಲಿ ರಾಜ ಬಳಲಿದನು.

ತನಯರಿಲ್ಲದ ಚಿಂತೆ ಕಾಡಲು
ಮನನ ಮಾಡುತ  ದೇವ ಚರಣವ
ಮುನಿವರೇಣ್ಯರ ಕರೆಸಿ ಕೇಳಿದ ರಾಜ ದಶರಥನು
ಮುನಿಗಳುಲಿಯುವ  ಮಾತು ಕೇಳುತ
ನೆನೆದು ತನ್ನಯ ತಂದೆ ತಾಯಿಯ
ಕನಸು ಕಾಣುತ  ಮಾಡಿ ಬಿಟ್ಟನು ಪುತ್ರ  ಕಾಮೇಷ್ಠಿ

ಪಂಕಜಾ.ಕೆ. ರಾಮಭಟ್

Comments

Popular posts from this blog

ಚಂದಿರ ಕವನ

ಚಂದಿರ ಕಾರಿರುಳ  ರಾತ್ರಿಯಲಿ ಮೋಡದ ಮರೆಯಿಂದ ಇಣುಕುತ ಬರುತಿಹನು ಬೆಳ್ಳಿಯತಟ್ಟೆಯ ತರದಲಿ ತೇಲುತ ತಾರೆಗಳನೊಡನಾಡುತ ಬರುತಿಹನು ರಸಿಕರ ಎದೆಯಲಿ ಕನಸನು ತುಂಬುತ ಮೈಮನಕೆಲ್ಲಾ ತಂಪನು ತರುತಿಹನು ಒಲ...

ಶಿಶು ಪ್ರಾಸ ಗೀತೆ

ಶಿಶು ಪ್ರಾಸ ಗೀತೆ  ಕಾವ್ಯಕೂಟ ಸ್ಪರ್ಧೆಗಾಗಿ   1  ಚುಕು ಚುಕು ಎನ್ನುವ ರೈಲು ಪುಟ್ಟನ ಕೈಯಲಿ ಕೋಲು ತಂಗಿಯೂ ಬಂದಳು ಜತೆಗೆ ಆಟವ ಆಡಲು ಹೊರಗೆ   2..ತುಂಟನು ನಮ್ಮ ಪುಟ್ಟ ತಂಟೆಯ ಮಾಡುತ ಬಿದ್ದ ಅಮ್ಮನು ಕೊಟ್ಟಳು ಪೆಟ್ಟು ಕೂಗುತ ಓಡಿದ  ಎದ್ದು ಬಿದ್ದು ಪಂಕಜಾ.ಕೆ.ಮುಡಿಪು 18.6 2020

ಮಗು..ನಗು

ಮಗು...ನಗು ಅರಳಿದೆ ತನುವು ನಿನ್ನೊಲವ ಸವಿದು ಸಂತಸದ ಹೊನಲು ಹರಿಯುತ್ತಿದೆಇಂದು ಒಲವಿನಾ ಬಳ್ಳಿಯು ಚಿಗುರುತಿದೆ ನಮ್ಮೊಲವಿಗೆ ಸಾಕ್ಷಿಯಾಗಿ ನಗುತಿದೆ ಮನದಲಿ  ಮುದ ತುಂಬಿದೆ ಇನಿಯ ಒಡಲೆಲ್ಲಾಹರಿದಾಡ...