Skip to main content

ರಾಮಕಥೆ ಭಾಗ 4

ರಾಮಕಥೆ  4
 ರಾಮನ ಜನನ
 ಭಾಮಿನಿ ಷಟ್ಪದಿಯಲ್ಲಿ 
ಪಂಕಜಾ ಕೆ ರಾಮಭಟ್

ಯಾಗ ಮಾಡಿದ ಪುಣ್ಯ ಫಲದಲಿ
ಬೇಗ ಮೂಡಿತು ಕುಡಿಯು ಗರ್ಭದಿ
ಬೀಗಿ ಬಿಟ್ಟನು ರಾಜ ದಶರಥ  ತುಂಬು ಸಂತಸದಿ
ಸಾಗಿ ದಿನಗಳು ಕಳೆದು ಬೇಗನೆ
ಮಾಗಿ ಶುಭದಿನದಂದು  ರಘುವರ
ನೀಗಿ ತಾಯಿಯ ಕಷ್ಟವೆಲ್ಲವ ಧರೆಗೆ ಬಂದಿಹನು

ಬಾಲರಾಮನು ಲೀಲೆ ತೋರುತ
ಹಾಲು ಕುಡಿಯುತ ಬೆಳೆದು ಬಿಟ್ಟನು
ಕಾಲಸರಿಯುತಲಿರಲು ಕಲಿತನು ಸಕಲ  ವಿದ್ಯೆಗಳ
ಗೋಳು ಹೇಳುತ ಬಂದ ಮುನಿಗಳು
ನಾಳೆ ರಾಮನ ಕಳಿಸಿರೆನ್ನುತ
ವೇಳೆ  ಬಂದಿದೆ ರಾಜಪುತ್ರರ ಶಕ್ತಿ ಮೆರೆಯಲಿಕೆ

ಅನುಜ  ಲಕ್ಷ್ಮಣನೊಡನೆ  ವನದಲಿ
ಮುನಿಗಳೆಲ್ಲರ ಸೇವೆ ಮಾಡುತ
ಮನನ ಮಾಡಿದನವರು ಕಲಿಸಿದ ವಿದ್ಯೆ ಬುದ್ದಿಗಳಾ
ಹನಿಸಿ ತನ್ನಯ ಬೆವರ ಹನಿಗಳ
ಮನೆಯ ತೊರೆದರು ಕ್ಲೇಶ ಪಡದೆಯೆ
ಮುನಿವರರಿಗೇ ಕಷ್ಟ ಕೊಡುತಿಹ ರಕ್ಕಸರ ತರಿದು

ತಾನು ಮಾಡಿದ ಯಜ್ಞ ಮುಗಿಯಲು
ಮೇನೆಯಿಲ್ಲದೆ ನಡೆದು ಬರುತಿರೆ
ಕಾನನವು ಕಳೆದಾಗ ಸಿಕ್ಕಿತು ಮಿಥಿಲೆ ಪಟ್ಟಣವು
ಮಾನಿನಿಯು ತಾ ಪಡೆದ ಶಾಪದಿ
ಧೇನಿಸುತ್ತಲಿ ರಾಮನಾಮವ
ಕಾನನದ ಬದಿಯಲ್ಲಿ ಶಿಲೆಯಂತಾಗಿ ಬಿದ್ದಿಹಳು

ಪಂಕಜಾ .ಕೆ. ರಾಮಭಟ್

Comments

Popular posts from this blog

ಚಂದಿರ ಕವನ

ಚಂದಿರ ಕಾರಿರುಳ  ರಾತ್ರಿಯಲಿ ಮೋಡದ ಮರೆಯಿಂದ ಇಣುಕುತ ಬರುತಿಹನು ಬೆಳ್ಳಿಯತಟ್ಟೆಯ ತರದಲಿ ತೇಲುತ ತಾರೆಗಳನೊಡನಾಡುತ ಬರುತಿಹನು ರಸಿಕರ ಎದೆಯಲಿ ಕನಸನು ತುಂಬುತ ಮೈಮನಕೆಲ್ಲಾ ತಂಪನು ತರುತಿಹನು ಒಲ...

ಶಿಶು ಪ್ರಾಸ ಗೀತೆ

ಶಿಶು ಪ್ರಾಸ ಗೀತೆ  ಕಾವ್ಯಕೂಟ ಸ್ಪರ್ಧೆಗಾಗಿ   1  ಚುಕು ಚುಕು ಎನ್ನುವ ರೈಲು ಪುಟ್ಟನ ಕೈಯಲಿ ಕೋಲು ತಂಗಿಯೂ ಬಂದಳು ಜತೆಗೆ ಆಟವ ಆಡಲು ಹೊರಗೆ   2..ತುಂಟನು ನಮ್ಮ ಪುಟ್ಟ ತಂಟೆಯ ಮಾಡುತ ಬಿದ್ದ ಅಮ್ಮನು ಕೊಟ್ಟಳು ಪೆಟ್ಟು ಕೂಗುತ ಓಡಿದ  ಎದ್ದು ಬಿದ್ದು ಪಂಕಜಾ.ಕೆ.ಮುಡಿಪು 18.6 2020

ಮಗು..ನಗು

ಮಗು...ನಗು ಅರಳಿದೆ ತನುವು ನಿನ್ನೊಲವ ಸವಿದು ಸಂತಸದ ಹೊನಲು ಹರಿಯುತ್ತಿದೆಇಂದು ಒಲವಿನಾ ಬಳ್ಳಿಯು ಚಿಗುರುತಿದೆ ನಮ್ಮೊಲವಿಗೆ ಸಾಕ್ಷಿಯಾಗಿ ನಗುತಿದೆ ಮನದಲಿ  ಮುದ ತುಂಬಿದೆ ಇನಿಯ ಒಡಲೆಲ್ಲಾಹರಿದಾಡ...