*ಶೂರ್ಪನಖಿಯ ಕಾಟ*
ಪದ್ಮಮುಖಿ (ಅಂಬಿನಿ) ವೃತ್ತ
ನಾಟಕವಾಡುತ ರಾವಣನಾನುಜೆ ಬಂದಿಹಳೈ
ಕೂಟಕೆ ಬಾರೆಲೆಯೆನ್ನುತ ರಾಮನ ಕಾಡಿದಳೈ
ಮಾಟವ ಮಾಡುತ ಕಣ್ಣಲೆ ಬಾಣವ ಹೂಡಿ ದಳೈ
ಕಾಟವ ತಾಳದೆ ರಾಮನು ದೂರಕೆ ನೂಕಿದನೈ
ಕೋಪದಿ ಲಕ್ಷ್ಮಣನಾಕೆಯ ಮೂಗನು ಕೊಯ್ದಿಹನೈ
ತಾಪವ ತಾಳದೆ ರಕ್ಕಸಿ ಕೂಗುತಲೋಡಿದಳೈ
ಶಾಪಕೆ. ಹುಟ್ಟಿದ ರಕ್ಕಸ ವೇಷವ ಹಾಕಿದನೈ
ರೂಪಸಿ ಸೀತೆಗೆ ಮೋಡಿಯ ಮಾಡಲು ಬಂದಿಹನೈ
ಚಿನ್ನದ ಜಿಂಕೆಯು ಸೀತೆಯ ಕಣ್ಣಿಗೆ ಬಿದ್ದಿಹುದೈ
ತಣ್ಣನೆಯಾಕೆಗೆ ಮೋಹಕ ಮೋಡಿಯ ಹಾಕಿಹುದೈ
ಕಣ್ಣಿಗೆ ಕಟ್ಟುವ ಸುಂದರ ರೂಪದ ಜಿಂಕೆಯದೈ
ಮುನ್ನವೆ ಬೇಕೆನಗೆನ್ನುತ ರಾಮನ ಕಾಡಿದಳೈ
ಪಂಕಜಾ. ಕೆ ರಾಮಭಟ್
Comments
Post a Comment