ಗಣೇಶ ಸ್ತುತಿ ಮೊದಲ ವಂದನೆಯ ಪಡೆಯುತ ವಿಘ್ನಗಳ ನಿವಾರಿಸುವ ವಿಘ್ನೇಶ್ವರ ವರಗಳ ಕೊಡುತ ಶರಣು ಬಂದವರ ಪೊರೆವ ವರಸಿದ್ದೀವಿನಾಯಕ ಮೋದಕಪ್ರೀಯನೇ ಗಜಮುಖವದನನೆ ಚ ಕ್ಕುಲಿಉಂಡೆಕ ಡುಬುಗಳೆಂದು ಬಗೆಬಗೆ ತಿಂಡಿಯ ಮಾಡಿ ಬೇಡಿಕೊಳ್ಳುವೆ ನಾನಿಂದು ಬಾದ್ರಪದ ಶುಕ್ಲದ ಚೌತಿಯ ಈ ಶುಭದಿನದಂದು ಬಂದು ನೀ ಹರಸು ನಮ್ಮನ್ನೆಲ್ಲರನು ವಿಘ್ನಗಳೆಲ್ಲವ ನಿವಾರಿಸುತಲಿ ವಿದ್ಯೆ ಬುದ್ಧಿ ಆಯುರಾರೋಗ್ಯ ಗಳ ಕೊಟ್ಟು ಪೊರೆಯೆಮ್ಮನು ಶಿರಬಾಗಿ ನಮಿಸುವೆ ಕಾಪಾಡುತಂದೆ. ಪಂಕಜಾ ಕೆ .