ಬಾ ತಾಯಿ ಪರಮೇಶ್ವರಿ (ವಾರ್ಧಕ ಷಟ್ಪದಿ) ಮಾಸವಿದು ನವರಾತ್ರಿ ಹಬ್ಬದಾ ದಿನವಹುದು ತೋಷವನು ಕೊಡುತಿಹಳು ದುರ್ಗಾಂಬೆ ಭಜಕರಿಗೆ ಹಾಸವನು ಬೀರುತಲಿ ಬರುತಿಹಳು ಬಿಳಿಯ ವಸನವನುಟ್ಟು ಶೈಲಪುತ್ರಿ ಮೋಸವಂಚನೆಗಳನು ಮಾಡುತ್ತಲಿರುವವರ ರೋಷದಲಿ ತುಂಡರಿಸಿ ಶಿರವನ್ನು ಬಿಸುಡುತ್ತ ನಾಶವನು ಮಾಡುತಿಹ ದುಷ್ಟರನು ಶಿಕ್ಷಿಸಲು ಚಂಡಿ ಚಾಮುಂಡಿಯಾಗಿ ಹರನನ್ನೊಲಿಸಲಿಕ್ಕೆ ತಪವನ್ನು ಮಾಡುತಲಿ ಕರಗಳಲಿ ಜಪಮಾಲೆ ಹಿಡಿಯುತ್ತ ಕುಳಿತಿಹಳು ಹರನನ್ನೆ ಪತಿಯಾಗಿ ಪಡೆಯಲಿಕೆ ಮನದಲ್ಲಿ ಶಿವನಾಮ ಪಠಿಸುತ್ತಲಿ ಹರನೊಲಿದು ಬಂದಾಗ ದುಷ್ಟರನು ನಿಗ್ರಹಿಸಿ ಹರಸತಿಯು ನವದಿನವು ತವಕದಲಿ ಬರುತಿಹಳು ಧರೆಯೆಡೆಗೆ ಮನುಜರಾ ಕಷ್ಟಗಳ ಕಳೆಯಲಿಕೆ ದುರುಳರನು ಬಡಿಯುತ್ತಲಿ ನವದಿನವು ಬಕುತಿಯಲಿ ಪೂಜೆಯನು ಮಾಡುತಿರೆ ಭವಿತದಲಿ ಬರುತಿರುವ ಕಷ್ಟಗಳ ಪರಿಹರಿಸಿ ನವರಂಗು ತುಂಬುವಳು ಭರದಲ್ಲಿ ಕರಪಿಡಿದು ಹರಿಸುತಲಿ ಕರುಣೆಯನ್ನು ತವನಿಧಿಯೆ ಗಿರಿಜಾಂಬೆ ಬೇಡುವೆನು ಕರಮುಗಿದು ನವರಾತ್ರಿ ದಿನದಲ್ಲಿ ಬಾ ತಾಯೆ ಮನೆ ಮನೆಗೆ ನವವಿಧದ ಪುಷ್ಪಗಳನರ್ಪಿಸುತ ಬೇಡುವೆನು ಹರಸೆನ್ನ ಹೇ ಜನನಿಯೇ ಕರುನಾಡ ಸಂಸ್ಕೃತಿಯ ಸಾರುತಿಹ ಹಬ್ಬವಿದು ಹರನರಸಿ ಪಾರ್ವತಿಯ ವಿಧವಿಧದ ರೂಪಗಳು ಮೆರವಣಿಗೆ ಮಾಡುತಲಿ...
*ನಮಿಸುವೆ ದೇವಿ* (ಭಾಮಿನಿ ಷಟ್ಪದಿ ) ಚರಣ ಕಮಲಕೆ ಬಾಗಿ. ನಮಿಸುತ ಹರನ ಮಡದಿಯೆ ಬೇಡಿಕೊಳ್ಳುವೆ ಹರಸು ನಮ್ಮನು ಮಾತೆ ಪಾರ್ವತಿ ಬೇಗ ನೀ ಬಂದು ವರದ ಹಸ್ತವ ಶಿರದಲಿಡುತಲಿ ಭರದಿ ಬಾ ನವರಾತ್ರಿ ದಿನದಲಿ ಕರವ ಮುಗಿಯುತ ನಿನ್ನ ಚರಣಕೆ ತಲೆಯ ಬಾಗುವೆನು ಕರದಿ ಹಿಡಿದಿಹ ಪುಷ್ಪವೆಲ್ಲವ- -ನಿರಿಸಿ ನಿನ್ನಯ ಪಾದ ಹಿಡಿಯುವೆ ತೊರೆದು ಮನಸಿನ ಕಾಮನೆಗಳನು ನಿನ್ನ ಪದತಲದಿ ಮರಣ ಕಾಲಕೆ ನಾಮ ಪಠಿಸಲು ಮರೆತು ಹೋಗದ ತೆರದಲೆನ್ನನು ಹರಸಿ ತುಂಬಿಸು ನಿನ್ನ ಜಪವನು ನನ್ನ ಮಸ್ತಕದಿ ನವದಿನದಲೂ ಪೂಜೆ ಮಾಡುತ ಕವನ ಮಾಲೆಯ ಕಟ್ಟಿ ಹಾಡುವೆ ಭವಿತವೆಲ್ಲವು ಸುಖದಿ ಕಳೆಯಲು ಹರಸು ಹೇ ಗೌರಿ ಕವಿದ ಮುಸುಕನು ಸರಿಸಿ ಬಿಡುತಲಿ ಭವದ ಬನ್ನವ ನೀಗಿಸುತ್ತಲಿ ನೆವನ. ಹೇಳದೆ ಪಾಲಿಸೆನ್ನನು ತಾಯಿ ದುರ್ಗಾಂಬೆ *ಪಂಕಜಾ. ಕೆ.ರಾಮಭಟ್*