ಮಂಗಳೂರು ಚುಟುಕು ಸಾಹಿತ್ಯ ಪರಿಷತ್ತು ವಾರದ ಚಟುವಟಿಕೆಗಾಗಿ ವಿಷಯ ಮೇ 1 ವಿಶ್ವ ಕಾರ್ಮಿಕರ ದಿನಾಚರಣೆ ಪ್ರಯುಕ್ತ ಕವನ ಕಾರ್ಮಿಕರ ಕಷ್ಟ ಹಗಲಿರುಳೆನ್ನದೆ ಕಸವನು ಗುಡಿಸುತ ಬೆಳಗಿನ ಜಾವವೆ ನಡೆವನು ಕಾರ್ಮಿಕ ಮಳೆ ಚಳಿ ಬಿಸಿಲನು ಲೆಕ್ಕಕೆ ತಾರದೆ ಕೆಲಸವ ಮಾಡುತಲಿ ಕಳೆವನು ತನ್ನಯ ದಿನಗಳ ದೂಳಲಿ ತೊಳೆಯುತ ಕೆಸರನು ನಗುಮುಖದಿಂದಲಿ ಬಳಿವನು ತನ್ನಯ ಬಾಳಿಗೆ ಬಣ್ಣವ ಕಾಯಕ ಮಾಡುತಲಿ ಜಡಿಮಳೆ ಯಲ್ಲಿಯು ಬೆಚ್ಚದೆ ಬೆದರದೆ ಬಿಡದೆಯೆ ಯೆಲ್ಲೆಡೆ ಹರಡಿದ ಕಸವನು ಹೊಡೆಯುತ ರೋಗವು ಬಾರದ ತೆರದಲಿ ಸ್ವಚ್ಚತೆ ಮಾಡುವನು ಎಲ್ಲೆಡೆ ಕಸವನು ಬಿಸುಡುವ ಮನುಜನೆ ದುಡಿಯುವ ಜನರಿಗೆ ಹೊಟ್ಟೆಗೆ ಹೊಡೆಯದೆ ಕೊಡುತಿರಿಯವನಾ ಕೆಲಸಕೆ ಫಲವನು ತಿಳಿಯುತ ಕಷ್ಟವನು ಪಂಕಜಾ ಕೆ.ರಾಮಭಟ್
ಸಾರ್ಥಕ ಬದುಕು ಘಮವ ಬೀರುತ ಅರಳಿ ಬಿಟ್ಟಿದೆ ಹೊನ್ನ ಬಣ್ಣದ ಹೂಗಳು ಸುಮದ ಮಧುವನು ಹೀರಲೆಂದು ಮುತ್ತಿ ಬರುತಿವೆ ದುಂಬಿಗಳು ದೊಡ್ಡ ಗಾತ್ರದ ಭೃಂಗ ಕುಳಿತಿದೆ ಸಣ್ಣ ಹೂವಿನ ಮಧ್ಯದಿ ಪರಾಗ ಸ್ಪರ್ಶಕೆ ದಾರಿಯಾಗಿದೆ ಭೃಂಗಗಳ ಒಡನಾಟದಿ ಕಣ್ಣು ತುಂಬುವ ಚೆಲುವ ಹೂವದು ದುಂಬಿಯಾಟಕೆ ಬಳಲಿದೆ ಮಧುವ ಸುರಿಸುತ ನಗುತ ನಲಿಯುತ ಒಂದೇ ದಿನದಲಿ ಬಾಡಿದೆ ಒಂದೇ ದಿನದ ಬದುಕಿದರದಾದರೂ ಜೀವ ಸಾರ್ಥಕ ಪಡೆದಿದೆ ದೇವ ಪಾದದಿ ಹೆಣ್ಣ ಮುಡಿಯಲಿ ನಕ್ಕು ಕಂಗಳ ಸೆಳೆದಿದೆ ಪಂಕಜಾ. ಕೆ.ರಾಮಭಟ್.