Skip to main content

Posts

ಪ್ರೇಮಿಗಳ ಸಲ್ಲಾಪ ಭಾವಗೀತೆ

ಪ್ರೇಮಿಗಳ ಸಲ್ಲಾಪ   ಚಂದಿರನು ಬಾನಲ್ಲಿ ಮೋಡಗಳ ಎಡೆಯಲ್ಲಿ ನಸುನಗುವ ಬೀರುತ್ತ ಬರುತಿರುವನು ಹುಣ್ಣಿಮೆಯ ದಿನದಲ್ಲಿ  ತಾರೆಗಳ   ಜತೆಸೇರಿ ಬೆಳದಿಂಗಳ ಬೆಳಕನ್ನು  ಹರಿಸುತಿಹನು ಶಶಿ ಕಿರಣ ಸೋಕುತಿರೆ ಕೊಳದಲ್ಲಿ ತುಂಬಿರುವ ನೈದಿಲೆಯು  ದಳ ತೆರೆದು ಅರಳುತ್ತಿದೆ ಶಶಿಯೊಡನೆ ಬೆರೆಯುತ್ತ ಚೆಲ್ಲಾಟವಾಡುತ್ತ   ನೋಡುಗರ ಮೈಯನ್ನು ತಾ  ಮರೆಸಿದೆ  ಬೆಳದಿಂಗಳ ಬೆಳಕು ಧರೆಯನ್ನು ತಬ್ಬುತಿ ರೆ ಪ್ರೇಮಿಗಳು ಮೈಮರೆತು ಕುಳಿತಿರುವರು ಚೆಂದುಟಿಯ ರಸವನ್ನು ಮೈಮರೆತು ಸವಿಯುತ್ತ ರಸಗಳಿಗೆಯಲ್ಲಿ ಮೈ ಮರೆತಿರುವರು ಪ್ರೇಮಿಗಳ ಸರಸವನು ನೋಡುತ್ತ ಚಂದಿರನು ಮೋಡಗಳ ಮರೆಯಲ್ಲಿ ಮುಖ ಮರೆಸಿದ ಒಲವನ್ನು ಸುರಿಸುತ್ತ    ತಿಂಗಳಿನ ಬೆಳಕಿನಲಿ ನವ ಜೋಡಿಗಳಿಗೆ ತಾ ಸಹಕರಿಸಿದ ಪಂಕಜಾ.ಕೆ.ರಾಮಭಟ್
Recent posts

ಹಸಿರಿನ ವನಸಿರಿ

ಹಸಿರಿನ ವನಸಿರಿ (ಒತ್ತಕ್ಷರವಿಲ್ಲದ ಕವಿತೆ) ಮಾಗಿಯ ಚಳಿಯಲಿ ಬೀಗುತ ನಿಂತಿದೆ ಸೋಗನು  ಹಾಕದ ಗಿಡಮರವು ಸಾಗುವ ಮೋಡವು  ಸೆಳೆಯಿತು  ಕಂಗಳ ರಾಗದಿ ಹಾಡಿದೆ ಕೋಗಿಲೆಯು ಕಾಡುತಿದೆ ನೆನಪು   ಎದೆಯನು ಹಿಂಡುತ ಮನವನು ಪೀಡಿಸಿ  ಬಿಡುತಿಹುದು ಗಾಳಿಗೆ ತೊನೆಯುವ  ಹಸಿರಿನ ಗಿಡಗಳು ಮನಸಿಗೆ ಶಾಂತಿಯ ಕೊಡುತಿಹುದು ಹೂಗಳು ಅರಳುತ ಗಂಧವ ಸೂಸಿದೆ  ದುಂಬಿಯು ಮಧುವನು  ಹೀರುತಿದೆ  ಮನಸಿನ ಬೇಸರ ಕಳೆಯುವ ತಾಣವು ಸೊಬಗಿನ ಸಿರಿ   ಮನ ತಣಿಸುತಿದೆ ನೋಡುವ ಕಂಗಳಿಗೆ  ತಂಪನು ತರುತಿದೆ ಉಸಿರನು ಕೊಡುತಿದೆ ತನುಮನಕೆ  ಹರಿಯುವ ನೀರಿನ ಮಂಜುಳ ನಾದವು ಕಳೆಯಿತು ಮನಸಿನ ಬೇಸರವ ಪಂಕಜಾ. ಕೆ.ರಾಮಭಟ್

ಬಾ ತಾಯಿ ಪರಮೇಶ್ವರಿ

ಬಾ ತಾಯಿ   ಪರಮೇಶ್ವರಿ (ವಾರ್ಧಕ ಷಟ್ಪದಿ) ಮಾಸವಿದು ನವರಾತ್ರಿ ಹಬ್ಬದಾ ದಿನವಹುದು ತೋಷವನು  ಕೊಡುತಿಹಳು ದುರ್ಗಾಂಬೆ  ಭಜಕರಿಗೆ ಹಾಸವನು ಬೀರುತಲಿ ಬರುತಿಹಳು ಬಿಳಿಯ ವಸನವನುಟ್ಟು ಶೈಲಪುತ್ರಿ  ಮೋಸವಂಚನೆಗಳನು ಮಾಡುತ್ತಲಿರುವವರ ರೋಷದಲಿ  ತುಂಡರಿಸಿ ಶಿರವನ್ನು ಬಿಸುಡುತ್ತ ನಾಶವನು ಮಾಡುತಿಹ ದುಷ್ಟರನು ಶಿಕ್ಷಿಸಲು  ಚಂಡಿ ಚಾಮುಂಡಿಯಾಗಿ  ಹರನನ್ನೊಲಿಸಲಿಕ್ಕೆ  ತಪವನ್ನು ಮಾಡುತಲಿ ಕರಗಳಲಿ ಜಪಮಾಲೆ ಹಿಡಿಯುತ್ತ   ಕುಳಿತಿಹಳು  ಹರನನ್ನೆ ಪತಿಯಾಗಿ ಪಡೆಯಲಿಕೆ ಮನದಲ್ಲಿ ಶಿವನಾಮ ಪಠಿಸುತ್ತಲಿ ಹರನೊಲಿದು  ಬಂದಾಗ ದುಷ್ಟರನು  ನಿಗ್ರಹಿಸಿ ಹರಸತಿಯು ನವದಿನವು ತವಕದಲಿ  ಬರುತಿಹಳು ಧರೆಯೆಡೆಗೆ   ಮನುಜರಾ ಕಷ್ಟಗಳ ಕಳೆಯಲಿಕೆ  ದುರುಳರನು ಬಡಿಯುತ್ತಲಿ  ನವದಿನವು   ಬಕುತಿಯಲಿ ಪೂಜೆಯನು ಮಾಡುತಿರೆ  ಭವಿತದಲಿ ಬರುತಿರುವ ಕಷ್ಟಗಳ ಪರಿಹರಿಸಿ ನವರಂಗು ತುಂಬುವಳು   ಭರದಲ್ಲಿ ಕರಪಿಡಿದು  ಹರಿಸುತಲಿ ಕರುಣೆಯನ್ನು ತವನಿಧಿಯೆ ಗಿರಿಜಾಂಬೆ  ಬೇಡುವೆನು ಕರಮುಗಿದು  ನವರಾತ್ರಿ ದಿನದಲ್ಲಿ ಬಾ ತಾಯೆ ಮನೆ ಮನೆಗೆ ನವವಿಧದ ಪುಷ್ಪಗಳನರ್ಪಿಸುತ ಬೇಡುವೆನು ಹರಸೆನ್ನ ಹೇ ಜನನಿಯೇ  ಕರುನಾಡ ಸಂಸ್ಕೃತಿಯ ಸಾರುತಿಹ ಹಬ್ಬವಿದು ಹರನರಸಿ ಪಾರ್ವತಿಯ ವಿಧವಿಧದ ರೂಪಗಳು ಮೆರವಣಿಗೆ ಮಾಡುತಲಿ...

ನಮಿಸುವೆ ದೇವಿ

*ನಮಿಸುವೆ ದೇವಿ* (ಭಾಮಿನಿ ಷಟ್ಪದಿ )  ಚರಣ ಕಮಲಕೆ  ಬಾಗಿ. ನಮಿಸುತ ಹರನ ಮಡದಿಯೆ ಬೇಡಿಕೊಳ್ಳುವೆ ಹರಸು ನಮ್ಮನು ಮಾತೆ ಪಾರ್ವತಿ ಬೇಗ ನೀ ಬಂದು   ವರದ ಹಸ್ತವ ಶಿರದಲಿಡುತಲಿ ಭರದಿ ಬಾ ನವರಾತ್ರಿ ದಿನದಲಿ ಕರವ  ಮುಗಿಯುತ ನಿನ್ನ ಚರಣಕೆ ತಲೆಯ ಬಾಗುವೆನು ಕರದಿ ಹಿಡಿದಿಹ ಪುಷ್ಪವೆಲ್ಲವ- -ನಿರಿಸಿ  ನಿನ್ನಯ ಪಾದ ಹಿಡಿಯುವೆ ತೊರೆದು ಮನಸಿನ ಕಾಮನೆಗಳನು ನಿನ್ನ ಪದತಲದಿ ಮರಣ ಕಾಲಕೆ ನಾಮ ಪಠಿಸಲು  ಮರೆತು ಹೋಗದ ತೆರದಲೆನ್ನನು ಹರಸಿ ತುಂಬಿಸು ನಿನ್ನ ಜಪವನು ನನ್ನ ಮಸ್ತಕದಿ  ನವದಿನದಲೂ  ಪೂಜೆ ಮಾಡುತ ಕವನ ಮಾಲೆಯ ಕಟ್ಟಿ ಹಾಡುವೆ ಭವಿತವೆಲ್ಲವು ಸುಖದಿ ಕಳೆಯಲು ಹರಸು ಹೇ ಗೌರಿ ಕವಿದ ಮುಸುಕನು ಸರಿಸಿ ಬಿಡುತಲಿ ಭವದ ಬನ್ನವ ನೀಗಿಸುತ್ತಲಿ ನೆವನ. ಹೇಳದೆ ಪಾಲಿಸೆನ್ನನು  ತಾಯಿ ದುರ್ಗಾಂಬೆ *ಪಂಕಜಾ. ಕೆ.ರಾಮಭಟ್*

ಗಣಪತಿ ಸ್ತುತಿ

ಆದಿಪೂಜಿತ ಗಣೇಶ ಗರಿಕೆಯ ಹುಲ್ಲಲಿ ಹಾಲಿನ ಹನಿಯ ನಿವೇದಿಸೆ ತಣಿಯುವುದೀ ಹೊಟ್ಟೆ ವರಗಳ ಕೊಡುವಾ ವಿಘ್ನ ನಿವಾರಕನಿಗೆ ವಂದಿಸಿ ಕಡುಬನು ಕೊಟ್ಟೆ ಡೊಳ್ಳಿನ ಹೊಟ್ಟೆಗೆ ಸರ್ಪವ ಸುತ್ತಿ ಇಲಿಯನ್ನೇರುತ ನೀ ಬಂದೆ ರಾವಣನ ಸೊಕ್ಕನು ಕ್ಷಣದಲಿ ಮುರಿದು ಜಗಕೆ  ಆನಂದವ  ನೀ ತಂದೆ ಕರದಲಿ ಅಂಕುಶ ಪಾಶವ ಹಿಡಿದು ಹೊಟ್ಟೆಯ ಕುಣಿಸುತ ಬಂದೆ  ಭಕ್ತರ ಕರೆಯನ್ನಾಲಿಸುತಿದ್ದು ವರಗಳ ಕೊಡುತಲಿ ನಿಂದೆ ನಿನ್ನನು ನೋಡಿ ನಕ್ಕವನೆಂದು  ಚಂದ್ರಗೆ ಶಾಪವ ಕೊಟ್ಟೆ ಇಲಿಯನ್ನೇರುತ  ಬರುತಿರೆ ನೀನು ಬಗೆ ಬಗೆ ತಿಂಡಿಯನಿಟ್ಟೆ ಮೊರದಗಲದ ಕಿವಿಯಲಿ ಗಾಳಿಯಬೀಸುತ ಸೊಂಡಿಲನಾಡಿಸಿ ಬರುವೆ ಗರಿಕೆಯ ಹುಲ್ಲನು ಅರ್ಪಿಸಿ ಬೇಡಲು  ಬೇಡಿದ ವರಗಳ  ಕೊಡುವೆ ಚೌತಿಯ ದಿನದಲಿ  ಬರುತಿಹ ನಿನ್ನನು ಭಕ್ತಿಯಲಿ ಸ್ತುತಿಸುತಲಿರುವೆ ವಿಘ್ನ ನಿವಾರಿಸಿ   ಸಕಲವ ಕೊಡುತಿರೆ ಮೋದದಿ ನಿನ್ನನು ಭಜಿಸುವೆ ಶರಣಾಗತರನು ಕಾಯುವೆ ಎಂಬ ಬಿರುದನು  ಪಡೆದಿಹೆ  ದೇವಾ ಕರಗಳ ಮುಗಿದು ಶಿರವನು ಬಾಗುವೆ ಕಳೆ  ನೀ ಎಮ್ಮಯ ನೋವಾ ಶ್ರೀಮತಿ.ಪಂಕಜಾ.ಕೆ. ರಾಮಭಟ್

ಆದಿ ಪೂಜಿತ ಗಣೇಶ

ಆದಿಪೂಜಿತ ಗಣೇಶ ಗರಿಕೆಯ ಹುಲ್ಲಲಿ ಹಾಲಿನ ಹನಿಯ ನಿವೇದಿಸೆ ತಣಿಯುವುದೀ ಹೊಟ್ಟೆ ವರಗಳ ಕೊಡುವಾ ವಿಘ್ನ ನಿವಾರಕನಿಗೆ ವಂದಿಸಿ ಕಡುಬನು ಕೊಟ್ಟೆ ಡೊಳ್ಳಿನ ಹೊಟ್ಟೆಗೆ ಸರ್ಪವ ಸುತ್ತಿ ಇಲಿಯನ್ನೇರುತ ನೀ ಬಂದೆ ರಾವಣನ ಸೊಕ್ಕನು ಕ್ಷಣದಲಿ ಮುರಿದು ಜಗಕೆ  ಆನಂದವ  ನೀ ತಂದೆ ಕರದಲಿ ಅಂಕುಶ ಪಾಶವ ಹಿಡಿದು ಹೊಟ್ಟೆಯ ಕುಣಿಸುತ ಬಂದೆ  ಭಕ್ತರ ಕರೆಯನ್ನಾಲಿಸುತಿದ್ದು ವರಗಳ ಕೊಡುತಲಿ ನಿಂದೆ ನಿನ್ನನು ನೋಡಿ ನಕ್ಕವನೆಂದು  ಚಂದ್ರಗೆ ಶಾಪವ ಕೊಟ್ಟೆ ಇಲಿಯನ್ನೇರುತ  ಬರುತಿರೆ ನೀನು ಬಗೆ ಬಗೆ ತಿಂಡಿಯನಿಟ್ಟೆ ಮೊರದಗಲದ ಕಿವಿಯಲಿ ಗಾಳಿಯಬೀಸುತ ಸೊಂಡಿಲನಾಡಿಸಿ ಬರುವೆ ಗರಿಕೆಯ ಹುಲ್ಲನು ಅರ್ಪಿಸಿ ಬೇಡಲು  ಬೇಡಿದ ವರಗಳ  ಕೊಡುವೆ ಚೌತಿಯ ದಿನದಲಿ  ಬರುತಿಹ ನಿನ್ನನು ಭಕ್ತಿಯಲಿ ಸ್ತುತಿಸುತಲಿರುವೆ ವಿಘ್ನ ನಿವಾರಿಸಿ   ಸಕಲವ ಕೊಡುತಿರೆ ಮೋದದಿ ನಿನ್ನನು ಭಜಿಸುವೆ ಶರಣಾಗತರನು ಕಾಯುವೆ ಎಂಬ ಬಿರುದನು  ಪಡೆದಿಹೆ  ದೇವಾ ಕರಗಳ ಮುಗಿದು ಶಿರವನು ಬಾಗುವೆ ಕಳೆ  ನೀ ಎಮ್ಮಯ ನೋವಾ ಶ್ರೀಮತಿ.ಪಂಕಜಾ.ಕೆ. ರಾಮಭಟ್

ಪಾರ್ವತಿ ಮಾತೆ

ಭಕ್ತಿಗೀತೆ ಪಾರ್ವತಿ  ಮಾತೆ   ಪರ್ವತ ರಾಜನ ಪ್ರೇಮದ ಪುತ್ರಿ ಪಾರ್ವತಿ ದೇವಿಗೆ ನಮೋ ನಮೋ ಶಿವನನು ಒಲಿಸಲು ತಪವನು ಮಾಡಿದ ಶಿವಗೌರಿಯೇ ನಮೋ ನಮೋ ತದಿಗೆಯ ದಿನದಲಿ ಭೂಮಿಗೆ ಬರುತಿಹ ನಿನ್ನನು ಪೂಜಿಸಿ ಮೈ ಮರೆವೇ  ಬನ್ನವ ಪಡದೆಯೇ ಬದುಕುವ ಪರಿಯನು ಕರುಣಿಸು ಮಾತೆಯೇ ಹೇ ಜನನಿ ಮಂಗಳ ವಾರದಿ ನಿನ್ನನು ಸ್ತುತಿಸಲು ಮಂಗಳವನು ನೀ ಕೊಡುವೆ ನವರಾತ್ರಿಯಲಿ. ನವದಿನ ಭಜಿಸಲು ಬವ ಬಂಧನವ ಕಳೆವೆ  ಮಾತೆಯ ಚರಣಕೆ  ಶಿರವನು ಬಾಗಿಸಿ ಬಕುತಿಯಲಿ ಸ್ತುತಿಸುತ ಬೇಡುವೆನು ಬೇಡಿದ ವರಗಳ ಕೊಡುತಿಹ ತಾಯಿಗೆ ಪುಷ್ಪಗಳರ್ಪಿಸಿ ನಮಿಸುವೆನು ಪಂಕಜಾ. ಕೆ.ರಾಮಭಟ್