Skip to main content

Posts

ಅರಿವು ಮೂಡಿದಾಗ ಕಥೆ

ಅರಿವು ಮೂಡಿದಾಗ   ಶ್ರೀಮಂತನಾದ ರಮೇಶನಿಗೆ ತಂದೆ ಕೇಳಿ ಕೇಳಿದಾಗಳೆಲ್ಲಾ  ಹಣ ಕೊಡುತ್ತಿದ್ದುದರಿಂದ  , ಹಣದ ಬೆಲೆ ತಿಳಿದಿರಲಿಲ್ಲ .  ಕಾಲೇಜಿಗೆ ನೆಪ ಮಾತ್ರಕ್ಕೆ ಹೋಗುತ್ತಾ ಗೆಳೆಯರ ಜತೆ  ಅಲ್ಲಿ ಇಲ್ಲಿ ತಿರುಗಾಡಿ ಮಜಾ ಮಾಡುವುದೇ ಅವನ ಕಾಯಕವಾಗಿತ್ತು. ಬಡವರೆಂದರೆ  ತಾತ್ಸಾರ ಮನೊಭಾವ ಹೊಂದಿದ್ದ ಆತ,  ಹರಿದ ಬಟ್ಟೆ ಹಾಕಿದ  ಬಡವರನ್ನು ಕಂಡರೆ ದೂರ ಸರಿಯುತ್ತಿದ್ದ.                 ಒಂದು ದಿನ ಸ್ನೇಹಿತರೆಲ್ಲ ಸೇರಿ ಜಾಲಿ ರೈಡ್ ಹೋಗುವುದೆಂದು ನಿರ್ಣಯಿಸಿದರು. ನಿಶ್ಚಿತ  ಸ್ಥಳಕ್ಕೆ ಯಾರು ಮೊದಲು ತಲುಪುತ್ತಾರೋ. ಅವರಿಗೆ 10000  ಬಹುಮಾನ ಎಂದು ಘೋಷಿಸಿದ ರಮೇಶ, ತಾನು ಅವರ   ಜತೆ  ತನ್ನ ಬೈಕಿನಲ್ಲಿ ಹೊರಡುವ ನಿರ್ಧಾರ ಮಾಡಿದ.  ಎಲ್ಲರೂ ಒಂದೊಂದು ದಾರಿ ಹಿಡಿದು ತಮ್ಮತಮ್ಮ ಬೈಕ್ ಚಲಾಯಿಸಿದರು. ರಮೇಶನೂ ವೇಗವಾಗಿ ಬೈಕ್ ಓಡಿಸುತ್ತಾ ಇರುವಾಗ ತಿರುವಿನಲ್ಲಿ ಆಯ ತಪ್ಪಿ ಕೆಳಗಿನ ಪ್ರಪಾತಕ್ಕೆ ಬೈಕ್ ಸಮೇತ ಉರುಳಿ ಬಿಟ್ಟ .              ಕಣ್ಣು ಬಿಟ್ಟಾಗ ತಾನೊಂದು ಹುಲ್ಲಿನ ಗುಡಿಸಿಲಿನಲ್ಲಿ ಇರುವುದು ತಿಳಿದು ಆತ ಮೆಲ್ಲಗೆ ಏಳಲು ಪ್ರಯತ್ನಿಸಿದಾಗ , ಮೈ ಕೈಯೆಲ್ಲ ನೋವಾಗಿ ಸಣ್ಣಗೆ ನರಳಿದ  .ಅಷ್ಟರಲ್ಲಿ ಅಲ್ಲಿಗೆ ಬಂದ ಕೆದರಿದ ಕೂದಲ ಹರಿದ ಬಟ್ಟೆ ತೊಟ್...
Recent posts

ಮಧುಮಾಸ

  ಮಧು ಮಾಸ ಕತ್ತನೆತ್ತಲು ಸುತ್ತು ಮುತ್ತಲು ಹಸಿರು ಹಂದರ ಹಾಸಿದೆ  ಚಿತ್ತವನ್ನು ಸೆಳೆದು ಬಿಡುತಲಿ ಬೇವು ಮಾವು ಚಿಗುರಿದೆ ನೆತ್ತಿ ಸುಡುವ ಬಿಸಿಲ ಝಳದಲೂ  ತಂಪು ಗಾಳಿಯ ಬೀಸಿದೆ ಕತ್ತಿ ಮಸೆಯದೇ   ವಸುಧೆಯೊಡಲನು ಉಳಿಸಿ ಬೆಳೆಸಬೇಕಿದೆ ಮಾಮರದಲಿ ಕುಳಿತು  ಕೋಗಿಲೆ ಮಧುರ ಗಾನವ ಹಾಡಿದೆ ಚಾಮರವ ಬೀಸುತಲಿ ತರುಲತೆಗಳು ನಲಿದಿವೆ ಭೂಮಿ ತಾಯಿಯ  ಮಡಿಲಿನಲ್ಲಿ  ನವೋಲ್ಲಾಸ ಮೂಡಿದೆ  ಬಾನಿನೆತ್ತರ ಬೆಳೆದ  ಮರಗಳು ಫಲವ ತುಂಬಿ ಬಾಗಿದೆ ವಸಂತ ಋತುವಿನ ಸೊಬಗ ಕಾಣಲು ಎರಡು ಕಣ್ಣು ಸಾಲದು ಹೊಸತು ಭಾವವ ಮನದಿ  ತುಂಬಿದೆ ಹೂವು ಹಣ್ಣುಗಳ ಸಾಲದು    ಹಸಿರು ಚಿಗುರಿದ ಗಿಡಮರಗಳು ತಲೆಯ ತೂಗುವ   ಪರಿಯಲಿ ರಸಿಕ  ಮನಗಳು ನಲಿಯುತಿದೆ ಹಸಿರು ತುಂಬಿದ ಧರೆಯಲಿ  ಪಂಕಜಾ. ಕೆ.ರಾಮಭಟ್  

ರಾಮಕಥೆ ಭಾಗ 4

ರಾಮಕಥೆ  4  ರಾಮನ ಜನನ  ಭಾಮಿನಿ ಷಟ್ಪದಿಯಲ್ಲಿ  ಪಂಕಜಾ ಕೆ ರಾಮಭಟ್ ಯಾಗ ಮಾಡಿದ ಪುಣ್ಯ ಫಲದಲಿ ಬೇಗ ಮೂಡಿತು ಕುಡಿಯು ಗರ್ಭದಿ ಬೀಗಿ ಬಿಟ್ಟನು ರಾಜ ದಶರಥ  ತುಂಬು ಸಂತಸದಿ ಸಾಗಿ ದಿನಗಳು ಕಳೆದು ಬೇಗನೆ ಮಾಗಿ ಶುಭದಿನದಂದು  ರಘುವರ ನೀಗಿ ತಾಯಿಯ ಕಷ್ಟವೆಲ್ಲವ ಧರೆಗೆ ಬಂದಿಹನು ಬಾಲರಾಮನು ಲೀಲೆ ತೋರುತ ಹಾಲು ಕುಡಿಯುತ ಬೆಳೆದು ಬಿಟ್ಟನು ಕಾಲಸರಿಯುತಲಿರಲು ಕಲಿತನು ಸಕಲ  ವಿದ್ಯೆಗಳ ಗೋಳು ಹೇಳುತ ಬಂದ ಮುನಿಗಳು ನಾಳೆ ರಾಮನ ಕಳಿಸಿರೆನ್ನುತ ವೇಳೆ  ಬಂದಿದೆ ರಾಜಪುತ್ರರ ಶಕ್ತಿ ಮೆರೆಯಲಿಕೆ ಅನುಜ  ಲಕ್ಷ್ಮಣನೊಡನೆ  ವನದಲಿ ಮುನಿಗಳೆಲ್ಲರ ಸೇವೆ ಮಾಡುತ ಮನನ ಮಾಡಿದನವರು ಕಲಿಸಿದ ವಿದ್ಯೆ ಬುದ್ದಿಗಳಾ ಹನಿಸಿ ತನ್ನಯ ಬೆವರ ಹನಿಗಳ ಮನೆಯ ತೊರೆದರು ಕ್ಲೇಶ ಪಡದೆಯೆ ಮುನಿವರರಿಗೇ ಕಷ್ಟ ಕೊಡುತಿಹ ರಕ್ಕಸರ ತರಿದು ತಾನು ಮಾಡಿದ ಯಜ್ಞ ಮುಗಿಯಲು ಮೇನೆಯಿಲ್ಲದೆ ನಡೆದು ಬರುತಿರೆ ಕಾನನವು ಕಳೆದಾಗ ಸಿಕ್ಕಿತು ಮಿಥಿಲೆ ಪಟ್ಟಣವು ಮಾನಿನಿಯು ತಾ ಪಡೆದ ಶಾಪದಿ ಧೇನಿಸುತ್ತಲಿ ರಾಮನಾಮವ ಕಾನನದ ಬದಿಯಲ್ಲಿ ಶಿಲೆಯಂತಾಗಿ ಬಿದ್ದಿಹಳು ಪಂಕಜಾ .ಕೆ. ರಾಮಭಟ್

ರಾಮಕಥೆ ಭಾಗ 3

ರಾಮಕಥೆ 3 ಭಾಮಿನಿ ಷಟ್ಪದಿ ಪಂಕಜಾ.ಕೆ. ರಾಮಭಟ್  ತನ್ನ ಮಕ್ಕಳ ತೆರದಿ ಸಾಕಿದ ಚೆನ್ನ ರಾಮನ ಮುದ್ದು ಮಕ್ಕಳು  ಚಿನ್ನ ಪುತ್ತಲಿಯಂತೆ ಹೊಳೆಯುತ ಕಥೆಯನೊರೆಯುವರು ಮುನ್ನ ಮಾಡಿದ ಪುಣ್ಯ ಫಲವಿದು ಕಣ್ಣ  ತುಂಬುವ ಚೆಲುವ ಮೂರುತಿ - -ಯನ್ನು  ಬಣ್ಣಿಸಿ  ಹಾಡಿ ಹೊಗಳುವ ಕಥೆಯ ಕೇಳುವುದು   ದೇಶ  ಕೋಸಲದಲ್ಲಿ ದಶರಥ ತೋಷದಿಂದಲಿ ಮಡದಿಯರೊಡನೆ ಕ್ಲೇಶವಿಲ್ಲದೆ  ರಾಜ್ಯಭಾರವ ಮಾಡುತಿರುತಿದ್ದ ವೇಷ ಹಾಕುವ ಜನರ ಮದ್ಯಧಿ ದೇಶದೆಲ್ಲೆಡೆ  ಕವಿದ ಬೇಸರ ಪಾಶದಂತೆಯೆ ಸೆಳೆದು ಬಿಡುತಲಿ ರಾಜ ಬಳಲಿದನು. ತನಯರಿಲ್ಲದ ಚಿಂತೆ ಕಾಡಲು ಮನನ ಮಾಡುತ  ದೇವ ಚರಣವ ಮುನಿವರೇಣ್ಯರ ಕರೆಸಿ ಕೇಳಿದ ರಾಜ ದಶರಥನು ಮುನಿಗಳುಲಿಯುವ  ಮಾತು ಕೇಳುತ ನೆನೆದು ತನ್ನಯ ತಂದೆ ತಾಯಿಯ ಕನಸು ಕಾಣುತ  ಮಾಡಿ ಬಿಟ್ಟನು ಪುತ್ರ  ಕಾಮೇಷ್ಠಿ ಪಂಕಜಾ.ಕೆ. ರಾಮಭಟ್

ರಾಮಕಥೆ ಭಾಗ 2

ರಾಮಕಥೆ 2 ಭಾಮಿನಿ ಷಟ್ಪದಿ  ಪಂಕಜಾ. ಕೆ. ರಾಮಭಟ್ ಬಂದ ನಾರದರನ್ನು ಕಾಣುತ ಮಂದಿಯೊಳಗುತ್ತಮನ ಚರಿತೆಯ ಕುಂದನಿಲ್ಲದೆ ಪೇಳು ನೀನೆನಗೆಂದ ವಾಲ್ಮೀಕಿ ಸಂದ ಕಾಲದಿ ನಡೆದ ಕಥೆಯಿದು ಕಂದ ರಾಮನ ಚರಿತೆಯೊರೆವೆನು  ಮುಂದೆ ನೀನದನೆತ್ತರಿಸಿ ಬರೆ ರಾಮ ಕಥೆಯನ್ನು ಎಂದು ಹೇಳಿದ ಮಾತನಾಲಿಸಿ ಮುಂದೆ ನಿಲ್ಲುತ  ಕೇಳಿ ಚರಿತೆಯ ಚಂದದಿಂದಲಿ  ರಾಮ ಕಥೆಯನು ಬರೆದ ವಾಲ್ಮೀಕಿ  ಅಂದು ನಡೆದಿಹ ವಿಷಯವೆಲ್ಲವ  ಮಂದಿಯೆಲ್ಲರನೊಟ್ಟುಗೂಡಿಸಿ ಕಂದ  ರಾಮನ ಚರಿತೆಯನುತಾ ಮುದದಿ ಹಾಡಿದನು ಪಂಕಜಾ ಕೆ. ರಾಮಭಟ್

ರಾಮಕಥೆ ಭಾಗ 1

ರಾಮಕಥೆ 1  (ಭಾಮಿನಿ ಷಟ್ಪದಿ ) ರಾಮ ಕಥೆಯನು ಮನದಿ ನೆನೆಯುತ ನೇಮ ನಿಷ್ಠೆಯ ಮಾಡಿ ಮುನಿವರ ಧಾಮದೆಡೆ ಬರುತಿರಲು ಕಂಡನು ತರುಣ ಹಕ್ಕಿಗಳ ಪ್ರೇಮ ಜೋಡಿಯು ಸರಸದಾಟದಿ ಕಾಮಿಸುತಲಿರುವಂಥ ಸಮಯದಿ ಕಾಮ ಬಾಣದ ತೆರದಿ  ಬೇಡನು  ಬಾಣ ಹೂಡಿದನು ಬೇಡ  ಬೀಸಿದ ಬಾಣ ತಗಲಲು ಬಾಡಿ  ಬಿದ್ದಿತು ಪಕ್ಷಿ ದೇಹವು ನೋಡಿ ಮುನಿವರ ಕೋಪದಿಂದಲಿ ಶಾಪ ಕೊಟ್ಟಿಹನು ಜೋಡಿ  ಹಕ್ಕಿಯ ಪ್ರಾಣ ಸಂಕಟ ಮಾಡಿ ಬಿಟ್ಟಿತು  ಮನಕೆ ಬೇಸರ ಕಾಡುತಿರುತಲಿ ರಾಮ ಸೀತೆಯ   ಕಥೆಯು ಮನಸಿನಲಿ ಕೊರಗುತಿರುವಾ ಮುನಿಯ ಕಾಣುತ ಭರಧಿ ಬಂದನು   ಬ್ರಹ್ಮ ದೇವನು ಹರಿಸಿದಂತಹ ಮಾತು ಶ್ಲೋಕದ ತೆರದಲಿರುತಿಹುದು ಕರವ ಹಿಡಿಯುತ  ತಿಳಿಸಿದವನಲಿ ವರವ ಕೊಟ್ಟನು   ಮನದಿ ಮೂಡಲು ಮರುಗದಿರು ನೀ  ರಾಮ ಸೀತೆಯ  ಕಾವ್ಯ ಬರೆಯೆಂದ ಪಂಕಜಾ.ಕೆ. ರಾಮಭಟ್

ಪ್ರಕೃತಿ ಹೊಡೆತ

         *ಪ್ರಕೃತಿ ಹೊಡೆತ* *(ಭಾಮಿನಿ ಷಟ್ಪದಿ)* ಬೀಸಿ ಬರುತಿಹ ಚಂಡ ಮಾರುತ ಬೀಸಿ ಹೊಡೆಯಿತು  ಜೀವ ರಾಶಿಗೆ ನಾಶವಾಯಿತು ಬೆಳೆದ ಬೆಳೆಗಳು  ಮಳೆಯ ರಭಸಕ್ಕೆ ಹಾಸಿ ಹೊದೆದಿಹ ಹಸಿರು ಸಂಪದ ಘಾಸಿಗೊಂಡಿತು  ಬೀಸು ಗಾಳಿಗೆ ತೋಷವೆಲ್ಲವು ಹೊರಟು ಹೋಯಿತು ರುದ್ರ ನರ್ತನಕೆ ಸದ್ದು ಮಾಡುತ  ಸುರಿದ  ನೀರಲಿ ಬಿದ್ದು ನರಳಿತು ಪಕ್ಷಿ ಸಂಕುಲ ಯುದ್ದ  ಭೂಮಿಯ  ತೆರದಿ  ಕಂಡಿತು ಧರೆಯ ಮಡಿಲೆಲ್ಲ ಹದ್ದು ಮೀರಿದ ಮನುಜನಾಟಕೆ ಗುದ್ದು ಕೊಟ್ಟನೆ  ಮಲ್ಲಿನಾಥನು ಗದ್ದೆ ಬಯಲಲಿ  ಬೆಳೆದ ಬೆಳೆಗಳು ನೆಲವ ಕಚ್ಚಿಹುದು ತುಂಬು ಗರ್ಭಿಣಿಯನ್ನು ಹೋಲುವ ತುಂಬಿ ತುಳುಕುವ ಹಸಿರು ಹೊನ್ನನು ನಂಬಿ ನಡೆಯದೆ  ಸ್ವಾರ್ಥಿ ಮನುಜನು ಹರಣ ಮಾಡಿದನು ಕಂಬದಂತಿಹ ಗುಡ್ಡ ಬೆಟ್ಟವ ಹುಂಬ ತನದಲಿ ಕಡಿದುರುಳಿಸಿದ - -ನೆಂಬ ಕಾರಣಕಿಂದು ಬಂದಿದೆ ಕಷ್ಟ ಕೋಟಲೆಯು *ಪಂಕಜಾ.ಕೆ.ರಾಮಭಟ್*