ಮುರಾರಿ ಮುರಳಿಯ ನುಡಿಸುವ ಮಾಧವನೆದೆಯಲಿ ತಲೆಯನ್ನಿಟ್ಟಳು ರಾಧೆ ಕರದಲಿ ತುಳಸಿಯ ಮಾಲೆಯ ಹಿಡಿಯುತ ಉಲಿದಳು ತನ್ನಯ ಬಾಧೆ ಮೋಹನಾಂಗನ ಜೊತೆಯಲಿ ನಲಿಯುವ ಬಯಕೆಯು ತುಂಬಿತು ಮನದಲ್ಲಿ ಕೃಷ್ಣನೆದೆಯಲಿ ರಾಧೆಗೆ ಮೊದಲ ಹಾಜರಿ ಯಮುನಾ ತೀರದ ದಡದಲ್ಲಿ ಜಳಕವನಾಡುವ ಗೋಪಿಕೆಯರನು ಕಾಡಿದ ಬಾಲ ಶ್ರೀ ಹರಿಯು ತುಂಟನ ತೆರದಲಿ ವಸ್ತ್ರವ ಅಪಹರಿಸಿ ಮನವನು ಗೆದ್ದನು ನರಹರಿಯು ಅಷ್ಟಮಿಯ ದಿನದಲಿ ಬೆಣ್ಣೆಯ ಮೆಲ್ಲಲು ಓಡಿ ಬರುವನು ಅಚ್ಯುತನು ಭಕ್ತರ ಕರೆಯನು ಆಲಿಸುತ್ತಲಿ ನಗುಮೊಗದಿಂದಲಿ ಕೇಶವನು ಕೃಷ್ಣ ನಿನ್ನಯ ಧ್ಯಾನವ ಮಾಡಲು ಕಷ್ಟವೆಲ್ಲವ ನೀಕಳೆವೆ ನಿಷ್ಠೆಯಿಂದಲಿ ಸೇವೆಯ ಮಾಡಲು ಇಷ್ಟವೆಲ್ಲವ ಕರುಣಿಸುವೆ ಪಂಕಜಾ.ಕೆ.ರಾಮಭಟ್
ರಸ ಗಂಗೆ ಬರೆದಿರುವ ಸಾಹಿತ್ಯ ಸೆರೆಹಿಡಿದು ಬಿಡಬೇಕು ತೆರೆಯುತಲಿ ಮಸ್ತಕದ ಪುಟಗಳನ್ನು ಹರಿಯುತಿಹ ರಸಗಂಗೆ ಕರಗಿಸಲು ಬೇಸರವ ಮರೆಸುತಿದೆ ಮನಸಿನಾ ಚಿಂತೆಯನ್ನು ಕವಿಮನದ ಭಾವನೆಯು ಸವಿಪಾಕದಂತಿರುತ ಸವಿಯಲಿಕೆ ಬೇಕಿಹುದು ರಸಿಕಮನವು ಬುವಿಯಲ್ಲಿ ತುಂಬಿರುವ ಸವಿಯಾದ ವಿಷಯಗಳು ನವಿರಾದ ಮನದಿಂದ ಹೊಮ್ಮಿರುವವು ಹದವಾಗಿ ಬೆರೆಸುತ್ತ ಪದಗಳಲಿ ಹಿಡಿದಿಡಲು ಮಧು ಹೀರುವಾನಂದ ಸವಿ ಮನಸಿಗೆ ಎದೆತೆರೆದು ಹಾಡುತಿರೆ ಸದೆಬಡಿದು ಬಿಡುತಿಹುದು ಗದೆಯಂತೆ ಕುಳಿತಿರುವ ಕಡುಚಿಂತೆಯ ಪಂಕಜಾ. ಕೆ.ರಾಮಭಟ್