Skip to main content

Posts

ಬಾ ತಾಯಿ ಪರಮೇಶ್ವರಿ

ಬಾ ತಾಯಿ   ಪರಮೇಶ್ವರಿ (ವಾರ್ಧಕ ಷಟ್ಪದಿ) ಮಾಸವಿದು ನವರಾತ್ರಿ ಹಬ್ಬದಾ ದಿನವಹುದು ತೋಷವನು  ಕೊಡುತಿಹಳು ದುರ್ಗಾಂಬೆ  ಭಜಕರಿಗೆ ಹಾಸವನು ಬೀರುತಲಿ ಬರುತಿಹಳು ಬಿಳಿಯ ವಸನವನುಟ್ಟು ಶೈಲಪುತ್ರಿ  ಮೋಸವಂಚನೆಗಳನು ಮಾಡುತ್ತಲಿರುವವರ ರೋಷದಲಿ  ತುಂಡರಿಸಿ ಶಿರವನ್ನು ಬಿಸುಡುತ್ತ ನಾಶವನು ಮಾಡುತಿಹ ದುಷ್ಟರನು ಶಿಕ್ಷಿಸಲು  ಚಂಡಿ ಚಾಮುಂಡಿಯಾಗಿ  ಹರನನ್ನೊಲಿಸಲಿಕ್ಕೆ  ತಪವನ್ನು ಮಾಡುತಲಿ ಕರಗಳಲಿ ಜಪಮಾಲೆ ಹಿಡಿಯುತ್ತ   ಕುಳಿತಿಹಳು  ಹರನನ್ನೆ ಪತಿಯಾಗಿ ಪಡೆಯಲಿಕೆ ಮನದಲ್ಲಿ ಶಿವನಾಮ ಪಠಿಸುತ್ತಲಿ ಹರನೊಲಿದು  ಬಂದಾಗ ದುಷ್ಟರನು  ನಿಗ್ರಹಿಸಿ ಹರಸತಿಯು ನವದಿನವು ತವಕದಲಿ  ಬರುತಿಹಳು ಧರೆಯೆಡೆಗೆ   ಮನುಜರಾ ಕಷ್ಟಗಳ ಕಳೆಯಲಿಕೆ  ದುರುಳರನು ಬಡಿಯುತ್ತಲಿ  ನವದಿನವು   ಬಕುತಿಯಲಿ ಪೂಜೆಯನು ಮಾಡುತಿರೆ  ಭವಿತದಲಿ ಬರುತಿರುವ ಕಷ್ಟಗಳ ಪರಿಹರಿಸಿ ನವರಂಗು ತುಂಬುವಳು   ಭರದಲ್ಲಿ ಕರಪಿಡಿದು  ಹರಿಸುತಲಿ ಕರುಣೆಯನ್ನು ತವನಿಧಿಯೆ ಗಿರಿಜಾಂಬೆ  ಬೇಡುವೆನು ಕರಮುಗಿದು  ನವರಾತ್ರಿ ದಿನದಲ್ಲಿ ಬಾ ತಾಯೆ ಮನೆ ಮನೆಗೆ ನವವಿಧದ ಪುಷ್ಪಗಳನರ್ಪಿಸುತ ಬೇಡುವೆನು ಹರಸೆನ್ನ ಹೇ ಜನನಿಯೇ  ಕರುನಾಡ ಸಂಸ್ಕೃತಿಯ ಸಾರುತಿಹ ಹಬ್ಬವಿದು ಹರನರಸಿ ಪಾರ್ವತಿಯ ವಿಧವಿಧದ ರೂಪಗಳು ಮೆರವಣಿಗೆ ಮಾಡುತಲಿ...
Recent posts

ನಮಿಸುವೆ ದೇವಿ

*ನಮಿಸುವೆ ದೇವಿ* (ಭಾಮಿನಿ ಷಟ್ಪದಿ )  ಚರಣ ಕಮಲಕೆ  ಬಾಗಿ. ನಮಿಸುತ ಹರನ ಮಡದಿಯೆ ಬೇಡಿಕೊಳ್ಳುವೆ ಹರಸು ನಮ್ಮನು ಮಾತೆ ಪಾರ್ವತಿ ಬೇಗ ನೀ ಬಂದು   ವರದ ಹಸ್ತವ ಶಿರದಲಿಡುತಲಿ ಭರದಿ ಬಾ ನವರಾತ್ರಿ ದಿನದಲಿ ಕರವ  ಮುಗಿಯುತ ನಿನ್ನ ಚರಣಕೆ ತಲೆಯ ಬಾಗುವೆನು ಕರದಿ ಹಿಡಿದಿಹ ಪುಷ್ಪವೆಲ್ಲವ- -ನಿರಿಸಿ  ನಿನ್ನಯ ಪಾದ ಹಿಡಿಯುವೆ ತೊರೆದು ಮನಸಿನ ಕಾಮನೆಗಳನು ನಿನ್ನ ಪದತಲದಿ ಮರಣ ಕಾಲಕೆ ನಾಮ ಪಠಿಸಲು  ಮರೆತು ಹೋಗದ ತೆರದಲೆನ್ನನು ಹರಸಿ ತುಂಬಿಸು ನಿನ್ನ ಜಪವನು ನನ್ನ ಮಸ್ತಕದಿ  ನವದಿನದಲೂ  ಪೂಜೆ ಮಾಡುತ ಕವನ ಮಾಲೆಯ ಕಟ್ಟಿ ಹಾಡುವೆ ಭವಿತವೆಲ್ಲವು ಸುಖದಿ ಕಳೆಯಲು ಹರಸು ಹೇ ಗೌರಿ ಕವಿದ ಮುಸುಕನು ಸರಿಸಿ ಬಿಡುತಲಿ ಭವದ ಬನ್ನವ ನೀಗಿಸುತ್ತಲಿ ನೆವನ. ಹೇಳದೆ ಪಾಲಿಸೆನ್ನನು  ತಾಯಿ ದುರ್ಗಾಂಬೆ *ಪಂಕಜಾ. ಕೆ.ರಾಮಭಟ್*

ಗಣಪತಿ ಸ್ತುತಿ

ಆದಿಪೂಜಿತ ಗಣೇಶ ಗರಿಕೆಯ ಹುಲ್ಲಲಿ ಹಾಲಿನ ಹನಿಯ ನಿವೇದಿಸೆ ತಣಿಯುವುದೀ ಹೊಟ್ಟೆ ವರಗಳ ಕೊಡುವಾ ವಿಘ್ನ ನಿವಾರಕನಿಗೆ ವಂದಿಸಿ ಕಡುಬನು ಕೊಟ್ಟೆ ಡೊಳ್ಳಿನ ಹೊಟ್ಟೆಗೆ ಸರ್ಪವ ಸುತ್ತಿ ಇಲಿಯನ್ನೇರುತ ನೀ ಬಂದೆ ರಾವಣನ ಸೊಕ್ಕನು ಕ್ಷಣದಲಿ ಮುರಿದು ಜಗಕೆ  ಆನಂದವ  ನೀ ತಂದೆ ಕರದಲಿ ಅಂಕುಶ ಪಾಶವ ಹಿಡಿದು ಹೊಟ್ಟೆಯ ಕುಣಿಸುತ ಬಂದೆ  ಭಕ್ತರ ಕರೆಯನ್ನಾಲಿಸುತಿದ್ದು ವರಗಳ ಕೊಡುತಲಿ ನಿಂದೆ ನಿನ್ನನು ನೋಡಿ ನಕ್ಕವನೆಂದು  ಚಂದ್ರಗೆ ಶಾಪವ ಕೊಟ್ಟೆ ಇಲಿಯನ್ನೇರುತ  ಬರುತಿರೆ ನೀನು ಬಗೆ ಬಗೆ ತಿಂಡಿಯನಿಟ್ಟೆ ಮೊರದಗಲದ ಕಿವಿಯಲಿ ಗಾಳಿಯಬೀಸುತ ಸೊಂಡಿಲನಾಡಿಸಿ ಬರುವೆ ಗರಿಕೆಯ ಹುಲ್ಲನು ಅರ್ಪಿಸಿ ಬೇಡಲು  ಬೇಡಿದ ವರಗಳ  ಕೊಡುವೆ ಚೌತಿಯ ದಿನದಲಿ  ಬರುತಿಹ ನಿನ್ನನು ಭಕ್ತಿಯಲಿ ಸ್ತುತಿಸುತಲಿರುವೆ ವಿಘ್ನ ನಿವಾರಿಸಿ   ಸಕಲವ ಕೊಡುತಿರೆ ಮೋದದಿ ನಿನ್ನನು ಭಜಿಸುವೆ ಶರಣಾಗತರನು ಕಾಯುವೆ ಎಂಬ ಬಿರುದನು  ಪಡೆದಿಹೆ  ದೇವಾ ಕರಗಳ ಮುಗಿದು ಶಿರವನು ಬಾಗುವೆ ಕಳೆ  ನೀ ಎಮ್ಮಯ ನೋವಾ ಶ್ರೀಮತಿ.ಪಂಕಜಾ.ಕೆ. ರಾಮಭಟ್

ಆದಿ ಪೂಜಿತ ಗಣೇಶ

ಆದಿಪೂಜಿತ ಗಣೇಶ ಗರಿಕೆಯ ಹುಲ್ಲಲಿ ಹಾಲಿನ ಹನಿಯ ನಿವೇದಿಸೆ ತಣಿಯುವುದೀ ಹೊಟ್ಟೆ ವರಗಳ ಕೊಡುವಾ ವಿಘ್ನ ನಿವಾರಕನಿಗೆ ವಂದಿಸಿ ಕಡುಬನು ಕೊಟ್ಟೆ ಡೊಳ್ಳಿನ ಹೊಟ್ಟೆಗೆ ಸರ್ಪವ ಸುತ್ತಿ ಇಲಿಯನ್ನೇರುತ ನೀ ಬಂದೆ ರಾವಣನ ಸೊಕ್ಕನು ಕ್ಷಣದಲಿ ಮುರಿದು ಜಗಕೆ  ಆನಂದವ  ನೀ ತಂದೆ ಕರದಲಿ ಅಂಕುಶ ಪಾಶವ ಹಿಡಿದು ಹೊಟ್ಟೆಯ ಕುಣಿಸುತ ಬಂದೆ  ಭಕ್ತರ ಕರೆಯನ್ನಾಲಿಸುತಿದ್ದು ವರಗಳ ಕೊಡುತಲಿ ನಿಂದೆ ನಿನ್ನನು ನೋಡಿ ನಕ್ಕವನೆಂದು  ಚಂದ್ರಗೆ ಶಾಪವ ಕೊಟ್ಟೆ ಇಲಿಯನ್ನೇರುತ  ಬರುತಿರೆ ನೀನು ಬಗೆ ಬಗೆ ತಿಂಡಿಯನಿಟ್ಟೆ ಮೊರದಗಲದ ಕಿವಿಯಲಿ ಗಾಳಿಯಬೀಸುತ ಸೊಂಡಿಲನಾಡಿಸಿ ಬರುವೆ ಗರಿಕೆಯ ಹುಲ್ಲನು ಅರ್ಪಿಸಿ ಬೇಡಲು  ಬೇಡಿದ ವರಗಳ  ಕೊಡುವೆ ಚೌತಿಯ ದಿನದಲಿ  ಬರುತಿಹ ನಿನ್ನನು ಭಕ್ತಿಯಲಿ ಸ್ತುತಿಸುತಲಿರುವೆ ವಿಘ್ನ ನಿವಾರಿಸಿ   ಸಕಲವ ಕೊಡುತಿರೆ ಮೋದದಿ ನಿನ್ನನು ಭಜಿಸುವೆ ಶರಣಾಗತರನು ಕಾಯುವೆ ಎಂಬ ಬಿರುದನು  ಪಡೆದಿಹೆ  ದೇವಾ ಕರಗಳ ಮುಗಿದು ಶಿರವನು ಬಾಗುವೆ ಕಳೆ  ನೀ ಎಮ್ಮಯ ನೋವಾ ಶ್ರೀಮತಿ.ಪಂಕಜಾ.ಕೆ. ರಾಮಭಟ್

ಪಾರ್ವತಿ ಮಾತೆ

ಭಕ್ತಿಗೀತೆ ಪಾರ್ವತಿ  ಮಾತೆ   ಪರ್ವತ ರಾಜನ ಪ್ರೇಮದ ಪುತ್ರಿ ಪಾರ್ವತಿ ದೇವಿಗೆ ನಮೋ ನಮೋ ಶಿವನನು ಒಲಿಸಲು ತಪವನು ಮಾಡಿದ ಶಿವಗೌರಿಯೇ ನಮೋ ನಮೋ ತದಿಗೆಯ ದಿನದಲಿ ಭೂಮಿಗೆ ಬರುತಿಹ ನಿನ್ನನು ಪೂಜಿಸಿ ಮೈ ಮರೆವೇ  ಬನ್ನವ ಪಡದೆಯೇ ಬದುಕುವ ಪರಿಯನು ಕರುಣಿಸು ಮಾತೆಯೇ ಹೇ ಜನನಿ ಮಂಗಳ ವಾರದಿ ನಿನ್ನನು ಸ್ತುತಿಸಲು ಮಂಗಳವನು ನೀ ಕೊಡುವೆ ನವರಾತ್ರಿಯಲಿ. ನವದಿನ ಭಜಿಸಲು ಬವ ಬಂಧನವ ಕಳೆವೆ  ಮಾತೆಯ ಚರಣಕೆ  ಶಿರವನು ಬಾಗಿಸಿ ಬಕುತಿಯಲಿ ಸ್ತುತಿಸುತ ಬೇಡುವೆನು ಬೇಡಿದ ವರಗಳ ಕೊಡುತಿಹ ತಾಯಿಗೆ ಪುಷ್ಪಗಳರ್ಪಿಸಿ ನಮಿಸುವೆನು ಪಂಕಜಾ. ಕೆ.ರಾಮಭಟ್

ಮುರಾರಿ

    ಮುರಾರಿ ಮುರಳಿಯ ನುಡಿಸುವ ಮಾಧವನೆದೆಯಲಿ ತಲೆಯನ್ನಿಟ್ಟಳು  ರಾಧೆ ಕರದಲಿ ತುಳಸಿಯ ಮಾಲೆಯ ಹಿಡಿಯುತ ಉಲಿದಳು ತನ್ನಯ ಬಾಧೆ ಮೋಹನಾಂಗನ ಜೊತೆಯಲಿ ನಲಿಯುವ  ಬಯಕೆಯು ತುಂಬಿತು ಮನದಲ್ಲಿ  ಕೃಷ್ಣನೆದೆಯಲಿ ರಾಧೆಗೆ  ಮೊದಲ ಹಾಜರಿ ಯಮುನಾ ತೀರದ ದಡದಲ್ಲಿ ಜಳಕವನಾಡುವ ಗೋಪಿಕೆಯರನು ಕಾಡಿದ  ಬಾಲ  ಶ್ರೀ ಹರಿಯು ತುಂಟನ ತೆರದಲಿ ವಸ್ತ್ರವ ಅಪಹರಿಸಿ ಮನವನು ಗೆದ್ದನು ನರಹರಿಯು ಅಷ್ಟಮಿಯ ದಿನದಲಿ ಬೆಣ್ಣೆಯ ಮೆಲ್ಲಲು ಓಡಿ ಬರುವನು ಅಚ್ಯುತನು  ಭಕ್ತರ ಕರೆಯನು ಆಲಿಸುತ್ತಲಿ   ನಗುಮೊಗದಿಂದಲಿ ಕೇಶವನು ಕೃಷ್ಣ ನಿನ್ನಯ ಧ್ಯಾನವ ಮಾಡಲು  ಕಷ್ಟವೆಲ್ಲವ ನೀಕಳೆವೆ ನಿಷ್ಠೆಯಿಂದಲಿ ಸೇವೆಯ ಮಾಡಲು ಇಷ್ಟವೆಲ್ಲವ ಕರುಣಿಸುವೆ ಪಂಕಜಾ.ಕೆ.ರಾಮಭಟ್

ರಸಗಂಗೆ

ರಸ ಗಂಗೆ ಬರೆದಿರುವ ಸಾಹಿತ್ಯ ಸೆರೆಹಿಡಿದು ಬಿಡಬೇಕು ತೆರೆಯುತಲಿ ಮಸ್ತಕದ ಪುಟಗಳನ್ನು ಹರಿಯುತಿಹ ರಸಗಂಗೆ  ಕರಗಿಸಲು ಬೇಸರವ ಮರೆಸುತಿದೆ ಮನಸಿನಾ ಚಿಂತೆಯನ್ನು ಕವಿಮನದ ಭಾವನೆಯು ಸವಿಪಾಕದಂತಿರುತ ಸವಿಯಲಿಕೆ  ಬೇಕಿಹುದು  ರಸಿಕಮನವು ಬುವಿಯಲ್ಲಿ ತುಂಬಿರುವ ಸವಿಯಾದ ವಿಷಯಗಳು ನವಿರಾದ   ಮನದಿಂದ  ಹೊಮ್ಮಿರುವವು ಹದವಾಗಿ ಬೆರೆಸುತ್ತ  ಪದಗಳಲಿ  ಹಿಡಿದಿಡಲು ಮಧು  ಹೀರುವಾನಂದ   ಸವಿ ಮನಸಿಗೆ ಎದೆತೆರೆದು  ಹಾಡುತಿರೆ  ಸದೆಬಡಿದು ಬಿಡುತಿಹುದು ಗದೆಯಂತೆ ಕುಳಿತಿರುವ  ಕಡುಚಿಂತೆಯ ಪಂಕಜಾ. ಕೆ.ರಾಮಭಟ್