Skip to main content

Posts

Showing posts from September, 2019

ಗಾಂಧಿ ತಾತ

ಗಾಂಧಿ ತಾತ ನುಡಿದಂತೆ ನಡೆದ ಕಾಯಕ ಯೋಗಿ ಸ್ವಚ್ಛ ಭಾರತದ ಕನಸನು ಕಂಡ ತ್ಯಾಗಿ ಆಡಂಬರದ ಬದುಕಿಗೆ ಬದ್ಧ ವಿರೋಧಿ ಇವರೇ ನಮ್ಮ ಗಾಂಧಿ ತಾತ ಶಾಂತಿಯ ಮಂತ್ರವ ಜಪಿಸಿದ ದೂತ ಭಾರತ ದೇಶಕೆ ಸ್ವಾತಂತ್ರ್ಯ ತಂದು ಕ...

ಸ್ವಚ್ಛ ಭಾರತ. 2

ಸ್ವಚ್ಛ ಭಾರತ ಮಹಾತ್ಮ ಗಾಂಧಿಯವರು ಕಂಡ ಕನಸು ಅದುವೇ ಸ್ವಚ್ಛ ಭಾರತದ ಕನಸು ನನಸಾಯಿತೆ ಅವರ ಈ ಕನಸು ಎಲ್ಲೆಲ್ಲೂ ತುಂಬಿದೆ ಕಸದ ತ್ಯಾಜ್ಯ ಸುರಿಯುವರು ರಸ್ತೆಗೆ ಮನೆ ಮನೆಯ ತ್ಯಾಜ್ಯ ಇದರಿಂದ ಹರಡುತಿದೆ ...

ಗೋಮುಖ ವ್ಯಾಘ್ರ ನ್ಯಾನೊ ಕಥೆ

ಗೋಮುಖ ವ್ಯಾಘ್ರ (ನ್ಯಾನೊ ಕಥೆ) ಆತ ಬಡವರ ಬಂಧು ದೀನ ದಲಿತರ ಕಣ್ಮಣಿ ಎನ್ನುವ ಬಿರುದಾಂಕಿತನಾಗಿದ್ದ ತನ್ನ ತಂದೆ ತಾಯಿಯರ ನೆನಪಿಗಾಗಿ ಪ್ರತೀವರ್ಷ ಅನಾಥಾಶ್ರಮಗಳಿಗೆ ವೃದ್ಧಾಶ್ರಮಗಳಿಗೆ ಹಣ್ಣುಹಂಪಲು ...

ಹಾಸ್ಯ ಚುಟುಕು 2 ಚಿನ್ನ. ಹುಡುಗಿ

ಹುಡುಗಿ(ಗ)  ಹಾಸ್ಯ ಚುಟುಕು 1 ಪೋನಿಟೈಲ್  ಹುಡುಗಿಯ ಕಂಡು ಅವಳ ಹಿಂದಿಂದೆ ಹೊರಟ ಗುಂಡ ಇನ್ನೇನು ಅವಳನ್ನು  ಮಾತಾಡಿಸಬೇಕು ತಿರುಗಿದ ಅವನನ್ನು ಕಂಡು ಅಲ್ಲೇ ಮೂರ್ಛೆ ಹೋದ  ಪಂಕಜಾ.ಕೆ. ಚಿನ್ನ ಮೈತುಂಬ ಧರಿ...

ಗಜಲ್ (ನಲ್ಲ)

ಗಜಲ್. ನಿನ್ನ ಮೋಹಕ ಕಾಂತಿಗೆ ಮರುಳಾದೆ ನಲ್ಲ ಕಣ್ಣ ನೋಟದ ಸೂಜಿಗಲ್ಲಿಗೆ ಬಲಿಯಾದೆ ನಲ್ಲ ಪ್ರೇಮವೆಂಬುದು ಹಾಗೆ ಮನಕೆ ಮುದವು ತುಂಟ ಕಣ್ಣಿನ ನೋಟಕೆ ಸೆರೆಯಾದೆ ನಲ್ಲ ಮೀಸೆಯಡಿಯ ನಗುವಿನಲಿದೆ ಏನೋಸೆಳೆ...

ಗಜಲ್ (ಸೆಳೆತ ದಬಗ್ಗೆ)

ಗಜಲ್. (ಸೆಳೆತದ ಬಗ್ಗೆ ) ಈ ಸೌಂದರ್ಯದ ಹೊಳಪಿಗೆ ಮರುಳಾದೆ ನಲ್ಲೆ ಕಣ್ಣ ನೋಟದ ಸೂಜಿಗಲ್ಲಿಗೆ ಬಲಿಯಾದೆ ನಲ್ಲೆ ಪ್ರೇಮವೆಂಬುದು ಹಾಗೆ ಮನಕೆ ಮುದವು ಪ್ರೀತಿಯ ಮೋಹಕತೆಗೆ ಸೆರೆಯಾದೆ ನಲ್ಲೆ ಚೆಂದುಟಿಯ ನಗು...

ಬಾನಾಡಿ. 2

ಬಾನಾಡಿ ರೆಕ್ಕೆ ಬಂದ ಹಕ್ಕಿಗಳು ಹಾರಡುತ್ತಿವೆ ಬಾನಿನಲಿ ತಾಯ ಬಿಸಿಯಪ್ಪುಗೆಯ ತೆಕ್ಕೆಯನುಸರಿಸಿಖುಷಿಯಲಿ ದೂರದೂರಿಗೆ ಹಾರಿ ಗೂಡುಕಟ್ಟಿ ನಲಿಯುತಿಹರಲ್ಲಿ  ಹೆತ್ತೊಡಲಿಗೆ ಬಟ್ಟೆ ಕಟ್ಟಿ ಮರೆತಿರ...

ನಗೆ ಮಲ್ಲಿಗೆ

ನಗೆ ಮಲ್ಲಿಗೆ ನಗೆ ಮಲ್ಲಿಗೆ ಅರಳಿಸುತ ನೀನಂದು ಬಂದೆ lಪl ಮನದ  ಬಯಲಲಿ ನೀ ಬಂದು ನಿಂತೆ llಅಪll ಚೆಲುವಾದ ಹೂವೊಂದು ಅರಳಿರುವ ಭಾವl ನಸು ನಗುವ ಮುಖದಲ್ಲಿ ನಗೆಮುಗುಳು ಹೂವll ಮನದಲ್ಲಿ ತುಂಬುತಿದೆ ನಿನ್ನೊಲವೇ ...

ನಿಶೆ

ನಿಶೆ ನಿಶೆ ಯೊಡನಾಡಲು ರವಿ ತೆರಳುವ ಹೊತ್ತು ನಭದ ತುಂಬಾ ತುಂಬಿತು ಬೆಳ್ಳಿ ಚುಕ್ಕಿಗಳ ರಂಗೋಲಿ ಇರುಳ ಚೆಲುವನು ಸಾರಲು ಬಂದವುl ಅಂಬರದ  ತುಂಬೆಲ್ಲ ಮುತ್ತಿನ ಮಣಿಗಳ ಸಾಲುll ಅಗಸದಿ ತಾರೆಗಳು ಕಣ್ಣುಮಿಟಿ...

ಹಂಬಲ ಭಾವಗೀತೆಯ ಬಗ್ಗೆ ವಿಮರ್ಶೆ 26 9 2019

[25/09, 4:18 PM] pankajarambhat: ಪಂಕಜಾ.ಕೆ *ಹಂಬಲ* ಕಣ್ಣ ಮುಂದೆ ದೃಶ್ಯ ಸೃಷ್ಟಿಸುವ ಕವನ.ಮನ ತಲುಪುವ ರಚನೆಯಾಗಿದೆ.    ವೃದ್ಧ ತಾಯಿಯೋರ್ವಳು ತನ್ನ ಮಗನ ಬರುವಿಕೆಗಾಗಿ ದುಃಖತಪ್ತ ಕಣ್ಣುಗಳಿಂದ ದಿಟ್ಟಿಸಿತ್ಯ ಬಾಗಿಲ ಬಳಿ ಇಂದು ಬಂ...

ವಿಮರ್ಶೆ ನನ್ನೊಲವೇ ಭಾವಗೀತೆಯ ಬಗ್ಗೆ

*ಪಂಕಜರ ಒಲವಿನ ಕುರಿತು ಬರೆಯಹೊರಟರೆ.......* ಪ್ರೀತಿ ಟಸಿಲೊಡೆಯುವ ರೀತಿಯೇ ಹಾಗೆ ಅರಿವೇ ಇರದೆ ಚಿಗುರುವ ಬಳ್ಳಿ ಅದು. ಇಲ್ಲಿ ಕವಿ ಮನಸ್ಸು ಅದರ ಕುರಿತಂತೇ ಹೇಳ ಹೊರಟಿದೆ. ತನ್ನ ಇನಿಯನ ಮೇಲೆ ಅದ್ಹೇಗೆ ಪ್ರೀತಿ ...

ನನ್ನೊಲವೇ (ಭಾವಗೀತೆ) ಅಕ್ಕರೆಯ ಬಗ್ಗೆ

ನನ್ನೊಲವೇ ಹೇಗೆ ಬಂದೆ ಎಂದು ಬಂದೆ ಅರಿಯಲಾರೆನು l ನನ್ನ ಮನದ ಗುಡಿಯಲ್ಲಿಂದು ನಿನ್ನ ಹೆಸರಿದೆ ll ಪ್ರೀತಿ ಸೋನೆ ಮಳೆಯ ಹನಿಸಿ l ಒಲವ ಸುಧೆಯ ಸುರಿಸುತ್ತಾ l ಚೆಲುವ ನೀನು ಮನದ  ಕದವ ತೆರೆಸಿ ಬಿಟ್ಟೆಯೋ?ll ಅಲ್ಲಿ ...

ಬಾವದಲೆ

ಬಾವದಲೆ ಮನದ ಮಲ್ಲಿಗೆ ಕನಸ ಹೆಣೆಯುತ ನೋವಿನ ತೆರೆಯನು ಸರಿಸಿದೆll ಬಾವದಲೆಗಳು ಮೈ ಮನವ ತುಂಬಿ ಜೀವಬಾವವು ನಲಿದಿದೆ l ಬಾಳಪಯಣದಿ ಜತೆಗೆ ಸೇರುತ ಹೊಸ ಕನಸುಗಳ ಮನದಲಿ  ಬಿತ್ತಿದೆ ll ಒಲವು ತುಂಬಿದ ಬಾಳತೇರನ...

ಮಾತೆ

ಮಾತೆ ಕಾಯುತಿದೆ ಜೀವವೊಂದು ಪ್ರೀತಿ ಸುರಿಸುವ ಕರಗಳಿಗಾಗಿ ನವಮಾಸಗಳು ಗರ್ಭದಲಿ ಹೊತ್ತು ಕಂದನ ಬೆಳವಣಿಗೆಯಲಿ ನಲಿದ ಹೊತ್ತು ಪ್ರತಿ ನಿತ್ಯ ದಿನಗಳನೆಣಿಸುತ ಕಾದು ಹೆತ್ತಳಾಕೆ  ನೂರು ಕಷ್ಟಗಳಲಿ ಬೆಂದು ಮಗುವಿನ ಬಾಲಲೀಲೆಯಲಿ ಮರೆತಳಾಕೆ ಕಷ್ಟ ನಷ್ಟಗಳ ಬೇಲಿ ಕಂದನ  ನಗುವಿನಲಿ ತಾ ನಕ್ಕು ಆತನ ಅಳುವಿನಲಿ ತಾ ಅತ್ತು ಕಷ್ಟಗಳ ಸೋಕಿಸದೆಯೆ ಬೆಳೆಸಿದಾ ತ್ಯಾಗಮಯಿ ಪಡೆದ ಪದವಿಯ ನಂಟು ಬೇಡವಾಯಿತವಗೆ ಮಮತೆಯ ಗಂಟು ಕಡಿದೊಗೆದ ತಾಯ ಮಮತೆಯನು ಅನಾಥಾಶ್ರಮಕೆ ದೂಡಿದನವಳನು ಕಣ್ಣೀರ ಕಡಲಲ್ಲಿ  ಹೆತ್ತು ಹೊತ್ತು ಸಾಕಿದ ಮಾತೆ ಕಂದನ ನೆನೆಯುತ ಹರಸುವ ಸಂಜಾತೆ ಕರುಣೆಯಿಲ್ಲದ ಆತನೊಬ್ಬ ಕಟುಕ ಹೆತ್ತಮ್ಮನ ಕರುಳ ಉರಿಸಿದ ಘಾತುಕ ಸಾಕಿ ಸಲಹಿದ ಮಾತೆಯ ಮಮತೆ ಮರೆಯುವರೇಕೋ  ಜನತೆ ಬರದಿರದೆ  ಅವರಿಗೂ ಅದೇ  ಗತಿ ಇರಲಾರದೇ ಅವರಿಗೆ ಆ ಭೀತಿ ಕಡೆಗಣಿಸದಿರಿ ವೃದ್ಧಾಪ್ಯದಲಿ ಹೆತ್ತವರ ಬಾಳು  ಗೋಳಾದೀತು  ಎಚ್ಚರ ಪಂಕಜಾ.ಕೆ.

ಹಂಬಲ. ಜೀವ ದ ಬಗ್ಗೆ ಬರೆದ ಭಾವಗೀತೆ

ಹಂಬಲ. (ಭಾವಗೀತೆ) ಜೀವವೊಂದು ಕಾಯುತಿದೆ ಕಾತರದ  ಕಣ್ಣುಗಳು ಬಾಗಿಲೆಡೆಗೆ ಸುಕ್ಕುಗಟ್ಟಿದ  ದೇಹ ಪರೆ ತುಂಬಿದ ಕಣ್ಣುಗಳು ನಡುಗುತಿದೆ ಕೈ ಕಾಲುಗಳು ಮಮತೆ ತುಂಬಿದ ಮನಸು ಅಡಿಗಡಿಗೆ ಒಸರುವ ಕಣ್ಣೀರು ಒರ...

ಅರುಣ ರಾಗ ವಿಕ್ರಮ ವಾರಪತ್ರಿಕೆ 29..9 2019 ರಲ್ಲಿ ಪ್ರಕಟಿತ

ಅರುಣ ರಾಗ ಹಸಿರಿನ ಹುಲ್ಲಿನ ಮೇಲೆ ಹರಡಿರುವ ಇಬ್ಬನಿಯ ಹನಿಗಳು ಮುತ್ತಿನ ಮಣಿಗಳ ತೆರದಿ ತೋರುತಿದೆ ರವಿಕಿರಣದ ಸ್ಪರ್ಶಕ್ಕೆ ಕರಗಿ ನೀರಾಗುತ ಸಪ್ತವರ್ಣದ ತೋರಣವ ಕಟ್ಟಿ  ನಲಿಯುತ್ತಿದೆ ಮಂದ ಮಾರುತ ಬ...

ತಂಗಾಳಿ (ಹನಿಕವನ)

    ತಂಗಾಳಿ (ಹನಿಕವನ) ಪ್ರಕೃತಿಯ ಮಡಿಲಲಿ ವಿಹರಿಸುತಿರಲುl ತಂಗಾಳಿ ಬೀಸಿ ಮೈಮನಕೆ ಮುದ ತಂದ ಹೊತ್ತು ll ಕಚಗುಳಿಯಿಡುತಿದೆ ನಿನ್ನ ನೆನಪುಗಳ ತಂಗಾಳಿ l ಮೈಮನವನು ಆವರಿಸಲು ಮತ್ತು ಅದೇನಾಯಿತೋ ನನಗೇನು ಗೊತ...

ಮಳೆಯ ಹನಿ

ಮಳೆಯ ಹನಿ ಬಾನಂಚಿನಲಿ ಹರಡಿರುವ ಮೋಡಗಳು ಮಳೆಯ ಹನಿಗಳ ಮುತ್ತುಗಳ ಸುರಿಸಿ ಇಳೆಯ ತಬ್ಬುತ ಸಂತೈಸಿತಂದು ಭೂರಮೆಯು ನಳ ನಳಿಸಿ ಬಿರಿದರಳಿ ಹಸಿರು ಹೂವು ಹಣ್ಣುಗಳ ತುಂಬಿ ನಗುವ ಚಂದವ ಕಂಡು ಮನ ತುಂಬಿತಿಂದ...

ಮುಂಗಾರು ಮಳೆ...3

ಮುಂಗಾರು ಮಳೆ ಹೊಸ ದಿನಕೆ ಹೊಸ ಕಿರಣದಲೆ ಹರಡುತ ಬಂದಿಹನು ಹೊನ್ನ ತೇರಿನಲೆ ಜಗವ ಬೆಳಗುವ ಆತುರ ಕಾತುರ ಬೆಂಕಿ ಉಂಡೆಯಂತೆ ಸುಡುತಿಹನು ಭಾಸ್ಕರ ಮುಂಗಾರು ಮಳೆಯ ಹನಿಗಳೆಲ್ಲಾ ರವಿಕಿರಣ ತಾಪಕೆ ನಲುಗಿದವ...

ವಿಪರ್ಯಾಸ ನ್ಯಾನೊ ಕಥೆ

ವಿಪರ್ಯಾಸ (ನ್ಯಾನೋ ಕಥೆ) ಆತ ನೆರೆಮನೆಯವರನ್ನುಕಂಡು ನಿತ್ಯ ಕರುಬುತ್ತಿದ್ದ  .ಒಂದಲ್ಲ ಒಂದು ರೀತಿಯಲ್ಲಿ ಅವರಿಗೆ ತೊಂದರೆ ಕೊಟ್ಟು ಕುಶಿ ಪಡುವುದೇ ಅವನ ದಿನಚರಿಯಾಗಿತ್ತು.  ಆ ದಿನ ಆತ ನೆರೆಮನೆಯವರು ಇ...

ಮುಯ್ಯಿಗೆ ಮುಯ್ಯಿ ನ್ಯಾನೊ ಕಥೆ

ಮುಯ್ಯಿಗೆ ಮುಯ್ಯಿ (ನ್ಯಾನೋ ಕಥೆ) ಆತ ದಿನಕ್ಕೊಬ್ಬ ಹೆಣ್ಣಿನ ಜತೆ ತಿರುಗುವ ಚಪಲ ಚೆನ್ನಿಗರಾಯ, ಮನೆಯಲ್ಲಿ ಹೆಂಡತಿಯ ಹತ್ತಿರ ಈ ಬಗ್ಗೆ ಜಂಬ ಕೊಚ್ಚಿಕೊಂಡು ಇರುತ್ತಿದ್ದ  .ಇದರಿಂದ ಹೆಂಡತಿ ರೋಸಿ ಹೋಗಿದ್...

ಗೋವಿನ ಮಹತ್ವ ಕಥೆ

    ಗೋವಿನ ಮಹತ್ವ ಬೆಳಗಿನ ಜಾವ ಐದು ಗಂಟೆಗೆ ಎದ್ದು, ಸ್ನಾನ ಮಾಡಿ ಬಾಗಿಲಿಗೆ ರಂಗೋಲಿ ಇಟ್ಟು, ದನಕರುಗಳ ಮೈಯನ್ನು ಉಜ್ಜಿ ,ಅವುಗಳಿಗೆ ತಿನ್ನಲು ಕುಡಿಯಲು ಕೊಟ್ಟು ಹಾಲು ಕರೆದು ಒಳಗೆ ಬರುವ ಅಭ್ಯಾಸ ಸೌಜನ್...

ಗಜಲ್ ನಿನ್ನೊಡನಾಟ

ಗಜಲ್ ನಿನ್ನೊಡನಾಟವು ಮನಕೆ ಮುದ ತಂದಿದೆ ಇನಿಯಾ ಮುಚ್ಚಿರುವ ಮನದ ಗುಡಿಯ ಕದತೆರೆದಿದೆ ಇನಿಯಾ ನಿನ್ನ ಬಾಹುಬಂಧನದಲ್ಲಿ ಸದಾ ಇರುವ ಆಶೆ ಮೈ ಮನಸಿನಲಿ ಖುಷಿಯು ತುಂಬಿದೆ ಇನಿಯಾ ಆತುರದಿ ಕಾಯುತ್ತಿದೆ ನಿ...

ಗಜಲ್ ನಮ್ಮದು

ಗಜಲ್. ಹಸಿರು ಕಾನನದಿಂದ ತುಂಬಿದ ನಾಡು ನಮ್ಮದು ತರುಲತೆಗಳು ತೂಗಿ ಬಾಗುವ ಬೀಡು ನಮ್ಮದು ಪರ್ವತ ಶ್ರೇಣಿಗಳ ಸಾಲು ತುಂಬಿದೆ  ದೇಶದೆಲ್ಲೆಡೆ ಪ್ರಾಕೃತಿಕ ಸಂಪತ್ತು ತುಂಬಿ ತುಳುಕುವ ಕಾಡು ನಮ್ಮದು ಉಳಿಸ...

ಗಜಲ್ 25 ನಮ್ಮದು

ಗಜಲ್. ಹಸಿರು ಕಾನನದಿಂದ ತುಂಬಿದ ನಾಡು ನಮ್ಮದು ತರುಲತೆಗಳು ತೂಗಿ ಬಾಗುವ ಬೀಡು ನಮ್ಮದು ಪರ್ವತ ಶ್ರೇಣಿಗಳಿಂದ ತುಂಬಿದೆ  ದೇಶದೆಲ್ಲೆಡೆ ಪ್ರಾಕೃತಿಕ ಸಂಪತ್ತು ತುಂಬಿ ತುಳುಕುವ ಕಾಡು ನಮ್ಮದು ಉಳಿಸಿ ...

ಗಜಲ್ 25 ನೀರಲ್ಲಿ ಆಡುವಆಶೆ

ಗಜಲ್ ಮಳೆ ಬಂದಾಗ ಹರಿವ ನೀರಿನಲಿ ಆಡುವಾಸೆ ಸಖಿ ಹಕ್ಕಿಗಳಂತೆ ಬಾನಿನಲಿ ಹಾರಡುವಾಸೆ ಸಖಿ ಜೀವನದಲ್ಲಿ ಮೇಲೆರಲು ಇರಬೇಕು ಬಾಳಿಗೆ ಗುರಿ ಪ್ರಯತ್ನಪಟ್ಟರೆ ಫಲ ಸಿಗಬಹುದೆಂಬಾಸೆ ಸಖಿ ಹೂವ ಜೇನನು ಸವಿಯಲು ...

ಗಜಲ್. 24 ನಿನ್ನೊಡನಾಟವ ಇನಿಯಾ

ಗಜಲ್ ನಿನ್ನೊಡನಾಟವು ಮನಕೆ ಮುದ ತಂದಿದೆ ಇನಿಯಾ ಮುಚ್ಚಿರುವ ಮನದ ಗುಡಿಯ ಕದತೆರೆದಿದೆ ಇನಿಯಾ ಅನುದಿನವು ನಿನ್ನ ಬಾಹುಬಂಧನದಲ್ಲಿ ಇರುವ ಆಶೆ ಮೈ ಮನಸಿನಲಿ ಖುಷಿಯು ತುಂಬಿದೆ ಇನಿಯಾ ಆತುರದಿ ಕಾಯುತ್ತ...

ನಮನ

ನಮನ ವಿದ್ಯೆ ಬುದ್ದಿಗಳ ಕಲಿಸಿ ಬಾಲ್ಯದಲ್ಲಿ ಕೈ ಹಿಡಿದು ಅಕ್ಷರವ ತಿದ್ದಿಸಿದ ಓ ನನ್ನ ಪ್ರೀತಿಯ ಅಮ್ಮ ಅಪ್ಪl ನೀವೆನ್ನ ಮೊದಲ ಗುರು ಸಲ್ಲಿಸುವೆ ನಿಮಗಿಂದು ನನ್ನ ನಮನ ll ಮನೆಯೇ ಮೊದಲ ಪಾಠಶಾಲೆ ಎನ್ನುವ ತ...

ವ್ಯವಸ್ಥೆ

ವ್ಯವಸ್ಥೆ ಮನುಜ ಮನುಜರ ನಡುವೆ ಜಾತಿ  ಬೀಜವ ಬಿತ್ತಿ ತಮ್ಮ ಕಾರ್ಯ ಸಾಧಿಸುವರಯ್ಯ ಕೈ ಕೈ ಬದಲಿಸುವ ಹಣಕ್ಕೆಎಲ್ಲಿದೆ ಜಾತಿ ನೀತಿ ಪಾಠವ ಹೇಳುತ ಮಾಡುವರು ಜಾತಿ ಬೇಧ ಕುಡಿಯುವ ನೀರಿಗಿಲ್ಲದ ಜಾತಿ ಅನ್ನ ನ...

ಮಳೆ ಇಳೆ ಭಾವಗೀತೆ

ಮಳೆ  ಇಳೆ (ಭಾವಗೀತೆ) ಏಕೆ ಮುನಿದೆ ಹೇಳುವರುಣ ಇಂದು ನನ್ನಲಿ?l ಸಾಕು ಸಾಕು ನಿನ್ನ ಕಾಟ ತಾಳಲಾರೆನುll ನಲ್ಲೇ ನಿನ್ನ ಬಿಸಿಯುಸಿರು ನನಗೆ ತಟ್ಟಿತುl ರವಿಕಿರಣದ ಬಿಸಿಗೆ ನೀನು ಸುಟ್ಟೆಯಲ್ಲವೇ?ll ಬಿಡು ಬಿಡು ಇಷ...

ಪರಿಭ್ರಮಣ ಬಗ್ಗೆ ಇನಿಯಾ ಗಜಲ್23

ಗಜಲ್. 23 ಮನಸು ಎತ್ತೆತ್ತಲೋ  ಅಲೆಯುತಿದೆ  ಇನಿಯಾ ಭಾವನೆಗಳ ಅಲೆಗಳು ಅಪ್ಪಳಿಸುತಿದೆ  ಇನಿಯಾ ಹೃದಯಗಳ ನಡುವಿನಲಿ ಬೆಸುಗೆ ಇದ್ದೇ ಇರುವುದು ಮನೆಯೊಂದು ನಂದನವನ ಎನಿಸುತಿದೆ ಇನಿಯಾ ಒಲವಿನ ಆಸರೆಯು ಬಾಳ...

ಗಜಲ್ ಎಂದರೇನು

ಗಜಲ್ ಎಂದರೇನು? ಗಜಲ್ ಮೂಲತ: ಅರಬಿ ಶಬ್ದ. ಹೆಂಗಸರೊಡನೆ ಮಾತನಾಡುವುದು, ಸಂಭಾಷಿಸುವುದು, ಪ್ರೇಮ, ಮೋಹ, ಅನುರಾಗ ವ್ಯಕ್ತಪಡಿಸುವುದೆಂದು ಇದರ ಅರ್ಥ. ಗಜಲ್ ಉರ್ದು ಕಾವ್ಯದ ಕೆನೆ, ಘನತೆ, ಗೌರವ, ಪ್ರತಿಷ್ಠೆ. ಅರಬ...